Showing posts with label ಸಾಗಿ ಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ shreekara vittala. Show all posts
Showing posts with label ಸಾಗಿ ಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ shreekara vittala. Show all posts

Monday 6 September 2021

ಸಾಗಿ ಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ ankita shreekara vittala

 ankita ಶ್ರೀಕರವಿಠಲ  

ರಾಗ: ಯದುಕುಲಕಾಂಬೋಜಿ ತಾಳ: ಆದಿ

 

ಸಾಗಿಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ


ಬಾಗಿಭಜಿಪೆ ಅನುರಾಗದಿ ಕೋರಿಕೆಯ ಸಲಿಸಲು ಮುನಿರಾಯ ಅ.ಪ


ಮಾಗಧರಿಪುಮತ ಸಾಗರದೊಳಗಿರುವ ಮೀನನೆಂದೆನಿಸುವ

ಯೋಗಿವರ್ಯ ಕೃಪಾಸಾಗರ ಸಲ್ಲಿಸುವ ಸೇವೆಯ ಕೈಗೊಳುವ

ಕೂಗಿಕರೆಯಲತಿವೇಗದಿ ಬಂದು ಪೊರೆವ ಬಿರುದನೆ ಧರಿಸಿರುವ 1

ನೇಮದಿಂದಲಿ ತವ ನಾಮ ಸ್ಮರಣೆಯ ಮಾಡುವ ಬಹುಪರಿಯ

ಸ್ವಾಮಿ ನಿನಗೆನ್ನ ಮನಸಿನಸ್ಥಿತಿಯು ತಿಳಿಯದೆ ಮಹರಾಯ

ನೀ ಮಾಡದೆ ತಡ ನೀಡೆನಗಭಯವರಕವಿಜನಗೇಯ 2

ಶ್ರೀಕರವಿಠಲನ ವಾಕುಲಾಲಿಸಿ ಬಂದ ಯತಿರೂಪದಲಿಂದ

ಬೇಕಾದ ವರವನು ಪಡೆದ ಭಕ್ತವೃಂದನಿನ್ನಯ ದಯದಿಂದ

ಯಾಕೆ ನಿರ್ದಯವಿಷ್ಟು ಬಾರಯ್ಯ ತ್ವರದಿಂದ ಮಂತ್ರಾಲಯದಿಂದ 3

***