Monday 6 September 2021

ಸಾಗಿ ಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ ankita shreekara vittala

 ankita ಶ್ರೀಕರವಿಠಲ  

ರಾಗ: ಯದುಕುಲಕಾಂಬೋಜಿ ತಾಳ: ಆದಿ

 

ಸಾಗಿಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ


ಬಾಗಿಭಜಿಪೆ ಅನುರಾಗದಿ ಕೋರಿಕೆಯ ಸಲಿಸಲು ಮುನಿರಾಯ ಅ.ಪ


ಮಾಗಧರಿಪುಮತ ಸಾಗರದೊಳಗಿರುವ ಮೀನನೆಂದೆನಿಸುವ

ಯೋಗಿವರ್ಯ ಕೃಪಾಸಾಗರ ಸಲ್ಲಿಸುವ ಸೇವೆಯ ಕೈಗೊಳುವ

ಕೂಗಿಕರೆಯಲತಿವೇಗದಿ ಬಂದು ಪೊರೆವ ಬಿರುದನೆ ಧರಿಸಿರುವ 1

ನೇಮದಿಂದಲಿ ತವ ನಾಮ ಸ್ಮರಣೆಯ ಮಾಡುವ ಬಹುಪರಿಯ

ಸ್ವಾಮಿ ನಿನಗೆನ್ನ ಮನಸಿನಸ್ಥಿತಿಯು ತಿಳಿಯದೆ ಮಹರಾಯ

ನೀ ಮಾಡದೆ ತಡ ನೀಡೆನಗಭಯವರಕವಿಜನಗೇಯ 2

ಶ್ರೀಕರವಿಠಲನ ವಾಕುಲಾಲಿಸಿ ಬಂದ ಯತಿರೂಪದಲಿಂದ

ಬೇಕಾದ ವರವನು ಪಡೆದ ಭಕ್ತವೃಂದನಿನ್ನಯ ದಯದಿಂದ

ಯಾಕೆ ನಿರ್ದಯವಿಷ್ಟು ಬಾರಯ್ಯ ತ್ವರದಿಂದ ಮಂತ್ರಾಲಯದಿಂದ 3

*** 


No comments:

Post a Comment