Monday 6 September 2021

ರಾಘವೇಂದ್ರ ಗುರುರಾಯರ ಭಜಿಸಿರೊ ಅಘಸಂಕುಲ ಪರಿಹಾರ ಪಡೆಯಿರೊ ankita ananta vittala

 ರಾಗ: ಹಂಸಾನಂದಿ ತಾಳ: ಆದಿ

ರಾಘವೇಂದ್ರ ಗುರುರಾಯರ ಭಜಿಸಿರೊ

ಅಘಸಂಕುಲ ಪರಿಹಾರ ಪಡೆಯಿರೊ


ಭಾಗವತರತುನನ ರಘುರಾಮಭಜಕನ

ನಿಗಮಾಗಮಜ್ಞನ ಅಗಣಿತಮಹಿಮನ ಅ. ಪ 


ನರಹರಿಯ ತೋರಿಸಿ ನರಪನಾಗಿ ಸೇವಿಸಿ

ಸಿರಿಕೃಷ್ಣನ ಒಲಿಸಿ ಮೆರೆದವ್ಯಾಸತಪಸಿ 1

ಸರುವಜ್ಞರಮತ ಸಾರಸುಧೆಗೆಹಿತ

ಪರಿಮಳವೀಯುತ ಹರಹಿದಪ್ರಥಿತ 2

ಖೇಟಪಿತಾನಂತವಿಠಲ ಪ್ರಿಯಸಂತ

ದಾಟಿಸಿಭವ ತ್ವರಿತ ದಿಟಪಾಲಿಪಮಹಿತ 3

***


No comments:

Post a Comment