Showing posts with label ಕ್ಷೋಣಿಯೊಳು ಸರ್ವಪುರಾಣಜ್ಞಸೂತರು karpara narahari. Show all posts
Showing posts with label ಕ್ಷೋಣಿಯೊಳು ಸರ್ವಪುರಾಣಜ್ಞಸೂತರು karpara narahari. Show all posts

Monday 2 August 2021

ಕ್ಷೋಣಿಯೊಳು ಸರ್ವಪುರಾಣಜ್ಞಸೂತರು ankita karpara narahari

 ಕ್ಷೋಣಿಯೊಳು ಸರ್ವಪುರಾಣಜ್ಞಸೂತರು

ಶೌನಕಾದಿ ಮುನಿಗಳಿಗೆ

ಶ್ರೀನಿವಾಸನ ಪದ ಧ್ಯಾನಿಸಿ ಸತ್ಕಥೆ

ಸಾನುರಾಗದಲಿ ಪೇಳಿದರು 1

ಕಾಳಿರಮಣ ಚಂದ್ರ ಮೌಳಿಗೆ ಮನೆಯೆಂದು

ಕೈಲಾಸಶಿಖರ ಮೆರೆವುದು

ಪೇಳಲಳವೆ ಇಂದ್ರನೀಲ ಮಾಣಿಕ್ಯಾದಿ

ಮೇಲಾದ ರತ್ನಕಾಂತಿಗಳಿಂ2

ಚೂತ ಚಂಪಕ ಪಾರಿಚಾತ ಬಕುಲ

ಜಂಬುಕೇತಕಿ ಪನಸ ಪುನ್ನಾಗ

ಖ್ಯಾತವಾದ ತರುವ್ರಾತಗಳಿಂದ

ಸರ್ವಾತಿಶಯದಲಿ ತೋರುವದು 3

ಸಿದ್ಧ ಚಾರಣ ತಪೋವೃದ್ಧರಿದೇ ಸ್ಥಳ

ಸಿದ್ಧಿದಾಯಕ ವೆಂದಿಲ್ಲಿ

ಹೃದ್ಗುಹದಲ್ಲಿ ಗೋವರ್ಧನ ಧರನಂಘ್ರಿ

ಪದಧ್ಯಾನದಿ ಕುಳಿತಿಹರು 4

ಪವನಸಂಯುತಮಾಗಿ ದಿವಿಜ ಶೇವಿತ ಮಾಗಿ

ಅವನಿಧರಾಗ್ರಣಿಯಾಗಿ

ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ

ಗಿರಿಯು ಮೆರೆಯುವುದು5

ಭಾಸುರ ರತ್ನಸಿಂಹಾಸನದಲಿ ಪರಮೇಶ್ವರ

ಪಾರ್ವತಿಯೊಡನೆ

ತೋಷದಿ ಕುಳಿತಿರಲಾ ಸಮಯದಿ ಸತಿ ಈಶಗೆ

ನಮಿಸಿ ನುಡಿದಳು 6

ಲೋಕಕ್ಕೆ ಹಿತವಾಗಬೇಕೆಂದು ಸತಿಯು ಪಿನಾಕಿಗೆ

ನುಡಿಯ ಲಾಕ್ಷಣದಿ

ಏಕಮನದಿ ಸರ್ವಲೋಕಮಾತೆಯವೃತ

ನಾಕರುಣಿಸುವೆ ಕೇಳೆಂದ7

ಧರೆಯೊಳು ಕಾಮಿತ ವರಗಳ ನೀಡುವ

ವರಮಹಾಲಕ್ಷ್ಮಿಯ ವೃತವು

ಪರಮ ಭಕುತಿಯಿಂದಾಚರಿಸಿದ ಕ್ಷಣದೊಳು

ದೊರೆವುದು ಸಕಲಸೌಭಾಗ್ಯ 8

ಮಾಸ ಶ್ರಾವಣ ಶುಕ್ರ ವಾಸರಯುತ

ಪೂರ್ಣ ಮಾಸಿಯ ದಿನದಿ ಪೂಜಿಪದು

ಭೂಸುರವರ್ಯ ಸುವಾಸಿನಿಯರನು

ವಿಶ್ವಾಸದಿಂದಾರಾಧಿಸುತಲಿ 9

ಸಣ್ಣಶ್ಯಾವಿಗೆ ಪರಮಾನ್ನ ಭಕ್ಷಾದಿ

ಪಕ್ವಾನ್ನ ಲೇಹ್ಯಾದಿ ನೈವೇದ್ಯ

ಚಿನ್ನದ್ಹರಿವಾಣದಿ ಚನ್ನಾಗಿ ಬಡಿಸಿ

ತತ್ತನ್ನಿಯಾಮಕರ ಚಿಂತಿಪುದು 10


ಧೂಪ ದೀಪಾದಿ ಸರ್ವೋಪಚಾರದಲಿ

ಕೃಪಾಪಯೋನಿಧೆಯ ಪೂಜಿಪುದು

ಕೋಪಧೂಪವು e್ಞÁನದೀಪಗಳಿಂದ

ಬಿಂಬಾಪರೋಕ್ಷಿಗಳು ಪೂಜಿಪರು 11

ಭೂಮಿ ಯೊಳೀವೃತ ನೇಮದಿಂದಲಿ ಮಾಡಿ

ಕಾಮಿತ ಪಡೆದವರ್ಯಾರು

ಸೋಮ ಶೇಖರನೆ ಪೇಳೀ ಮಹಾವೃತದ

ಮಹಾಮಹಿಮೆಯನು ಚನ್ನಾಗಿ12

ಧರೆಯೊಳು ಕುಂಡಿನ ಪುರದೊಳಗೊಬ್ಬ ಭೂಸುರನ

ಮಡದಿ ತಾನಿರಲು

ಸರಸಿಜಾಂಬಕಿಯ ಪೆಸರು ಚಾರುಮತಿಯೆಂದು

ಕರೆಯುವರೆಲ್ಲಾರು ಪುರದಿ 13

ಅನುದಿನದಲಿ ಗುರುಜನರ ಶೇವಿಸುವದೆ

ವನಜನಾಭನ ಶೇವೆಯೆಂದು

ಇನಿಯನ ನುಡಿಗಳಿಗನುಸರಿಸುತ ಭಹು ವಿನಯಾದಿ

ಗುಣದಿ ಭೂಷಿತಳು 14

ನಂದದಿ ಮಲಗಿರಲೊಂದಿನ ಸ್ವಪ್ನದಿ

ಬಂದಳು ವರಮಹಾಲಕ್ಷ್ಮಿ

ಸುಂದರಿ ವರವ ಬೇಡೆಂದು ನುಡಿಯೆ ಪದಕೊಂದಿಸಿ

ಪರಮ ಸಂಭ್ರಮದಿ 15

ಸಿರಿದೇವಿ ನಿನ್ನಯ ಕರುಣದಿ ಬ್ರಹ್ಮನು

ನಿರ್ಮಿಸುವನು ಜಗವೆಲ್ಲ

ಪರಮಧನ್ಯಳಾದೆ ದರುಶನದಿಂದಘತರಿದು

ನೀ ಕರುಣಿಸು ಮಾತೆ 16

ಬರಲು ಶ್ರಾವಣ ಶುಕ್ರವಾರ ಪೂರ್ಣಮಿ

ಹರುಷದಿಂದೆನ್ನಯ ವೃತವ

ಚರಿಸಿದಾಕ್ಷಣದೊಳು ಗರಿವೆ ಸಂಪದವೆಂದು

ವರಗಳನಿತ್ತಳು ದಯದಿ 17

ಇಂತಾದ ಸ್ವಪ್ನ ವೃತ್ತಾಂತ ಸ್ವಜನಕತಿ

ಸಂತೋಷದಲಿ ಪೇಳಲವರು

ಇಂತು ನುಡಿದರು ನಿಶಾಂತದಿ ಸ್ವಪ್ನವು

ಚಿಂತಿತ ಫಲವೀವುದೆಂದು 18

ರಂಗವಲ್ಯಾದಿ ಚಿತ್ರಗಳಿಂದಲಿ ಮನಿ

ಸಿಂಗರಿಸಿದಳಾದಿನದಿ

ಅಂಗನೆ ಮಿಂದುಟ್ಟು ಶೃಂಗಾರದಿಂದ

ವಿಪ್ರಾಂಗನೆಯರನು ಕರೆದಳು 19

ಕರೆಯ ಲಾಕ್ಷಣದಲ್ಲಿ ಪುರದ ನಾರಿಯರೆಲ್ಲ

ಶಿರಿದೇವಿ ಪೂಜಾಸಾಧನವ

ಧರಿಸುತ ಕರದೊಳು ಹರುಷದಿಂದಲಿ ಬಂದು

ನೆರೆದರಾ ದ್ವಿಜನಮಂದಿರದಿ 20

ಅಂಬುಜಮುಖಿಯರು ಸಂಭ್ರಮದಲಿ ಪೂರ್ಣ

ಕುಂಭಗಳಿಟ್ಟಘ್ರ್ಯಾದಿಗಳಿಂ

ಅಂಬುಧಿಸುತೆಯ ಪಾದಾಂಬುಜ ಪೂಜಿಸೆ ಕುಂಬಿಣಿ

ಸುರರ ಸಮ್ಮುಖದಿ 21

ಇಂದು ವದನೆಯರಾನಂದದಿ ಪಾಡುತ

ಇಂದಿರ ದೇವಿಗಾರುತಿಯ

ತಂದು ಬೆಳಗಿದರು ಛಂದದಿಂದಲಿ ದೋರು

ಬಂಧÀ£ವÀನÉ ಮಾಡುತಿಹರು 22

ರಾಜಮುಖಿಯು ಸರ್ವರಾಜೋಪಚಾರದಿ

ಪೂಜಿಸುತಿರಲಾಗೃಹವು

ರಾಜಿಸುತಿರೆ ಸುರರಾಜ ಭವನದಂತೆ

ಸೋಜಿಗವಾಯ್ತು ನೋಳ್ಪರಿಗೆ 23

ಸ್ವರ್ಣಮಯಾಂಬರ ಚರಣದಿ ನೂಪುರ

ಕೊರಳೊಳುನವರತ್ನಹಾರ

ಪರಿಶೋಭಿಸಲು ಕಂಡು ಬೆರಗಾದಳಂಗನೆ

ಸಿರಿದೇವಿ ಕರುಣವಿದೆಂದು 24

ಮುತ್ತೈದೆಯರು ಭೂಸುರೋತ್ತಮರಿಗೆಲ್ಲ

ಇತ್ತರು ಬಾಗಿಣಗಳನು

ಭಕ್ತಿಯಿಂದೆಲ್ಲರು ಚಿತ್ತದಿ ಹರುಷ ಬಡುತ್ತ

ಪೋದರು ತಮ್ಮ ಮನೆಗೆ 25

ಧನ್ಯಳು ಸುಗುಣ ಸಂಪನ್ನೆ ಚಾರುಮತಿ

ಪುಣ್ಯದಿಂದೆಲ್ಲರು ನಾವೆಂ

ದನ್ಯೋನ್ಯ ನುಡಿಯುತ ಬಣ್ಣಿಸಿದರು

ಧನಧಾನ್ಯ ಸಂಪದಾಗಮನ 26

ಈ ಲಕುಮಿಯ ಕಥೆ ಹೇಳಿಕೇಳಿದರ

ಪಾಲಿಸುವಳು ಸಿರಿಯೆಂದು

ಶೈಲಕುಮಾರಿಗೆ ಕೈಲಾಸ ಶಿಖರದಿ ಪೇಳಿದ

ಶಿವನು ಹೀಗೆಂದು ||27|

ತೋಯಜಾಕ್ಷಿಯೆ ಕೇಳು ಗಾಯನಮಾಡಲು

ಕಾಯಜ ಜನನಿಯ

ಆಯುರಾರೋಗ್ಯ ಐಶ್ವರ್ಯಾದಿಗಳ ಕೊಟ್ಟು

ಕಾಯುವದೆಂದು ನೀ ತಿಳಿಯೆ 28

ಕಲಿಕೃತ ದೋಷವ ಕಳೆದು ಕೊಡುವ

ನಿರ್ಮಲ ಭಕ್ತಿe್ಞÁನ

ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ

ಒಲಿವನು ನಿರುತ ಪಠಿಸಲು30

****