Showing posts with label ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು prasanna. Show all posts
Showing posts with label ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು prasanna. Show all posts

Friday 19 February 2021

ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು ankita prasanna


ಕೃಷ್ಣ:  ದೂರದಿ ನಿಲ್ಲೆಲೆ ಬಾಲೆ ಎನ್ನ
ಜಾರನು ಎಂದು ತಿಳಿದೆಯೋ

 ಗೋಪಿ: ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮ-
ಚಾರಿಯೆಂದರಿತೇನೋ ... ಕೃಷ್ಣಾ

ಕೃಷ್ಣ:  ಅಂಗಸಂಗ ಯಾಚಿಸಲು ಎನ್ನ ಅ-
ನಂಗನೆಂದು ಭ್ರಮಿಸಿದೆಯಾ.. ಗೋಪೀ

ಗೋಪಿ: ಸಂಗದಿಂದ ಪಾಪ ಭಂಗಮಾಡುವ ಅ-
ನಂಗ ಜನಕನೆಂದರಿತೇನೋ .. ಕೃಷ್ಣಾ..

ಕೃಷ್ಣ: ಪತಿಯನು ಬಿಟ್ಟು ನೀ ಬಂದು ಬಾಲೆ 
ಪತಿತಳಾಗದಿರು ಇಂದು ಗೋಪೀ ..

ಗೋಪಿ:  ಪತಿತಪಾವನ ಜಗತ್ಪತಿಯು ಎನಗೆ ನೀನು ಪತಿಯೆಂದು ತಿಳಿದು ಬಂದಿರುವೆ  .. ಕೃಷ್ಣಾ..

ಕೃಷ್ಣ:  ನಿಂದಿಸರೇ ನಿನ್ನ ಜನರು ಬಾಲೆ
ಹಿಂದು ಮುಂದು ನುಡಿಗಳಲಿ.. ಗೋಪೀ..

ಗೋಪಿ: ಮುಕುಂದನ ಪ್ರಿಯಳನು ನಿಂದಿಪ ಜನರೆಲ್ಲಾ
ಮಂದಮತಿಗಳು ಅಲ್ಲವೇನೋ ಕೃಷ್ಣಾ..

ಕೃಷ್ಣ: ನಿನ್ನ ನಡತೆ ತರವಲ್ಲ ಬಾಲೆ 
ಚನ್ನಾಗಿ ಯೋಚಿಸು ಎಲ್ಲಾ ಬಾಲೆ.... 

ಗೋಪಿ: ಇನ್ನು ತಾಳಲಾರೆ ಕನ್ಯೆಯ ಮ್ಯಾಲೆ ಪ್ರ-
ಸನ್ನ ನಾಗೋ ಶ್ರೀಕೃಷ್ಣಾ.... ಕೃಷ್ಣಾ....
********


ಶ್ರೀಕೃಷ್ಣ- ಗೋಪಿಯರ ಸಂವಾದ

ಶ್ರೀಕೃಷ್ಣನು ಮನಸ್ಸಿಗೆ ಚುಚ್ಚುನುಡಿಗಳ ಮುಖಾಂತರ ಎಚ್ಚರಿಕೆಯನ್ನು ನೀಡುತ್ತಾ, ಅಂದರೆ ಎಷ್ಟೇಜನ ಬಾಂಧವರಿದ್ದರೂ ನಿಜವಾದ ಬಂಧು ತಾನೇ ಜೀವರಿಗೆ ಅಂತ ತಿಳಿಸುವ,  ತನ್ನ ಪಾದಾರವಿಂದಗಳಲ್ಲಿ ಮನಸ್ಸನ್ನು ನೆಲೆಗೊಳ್ಳಿಸಿಕೊಳ್ಳುವುದೇ ಮೋಕ್ಷ ಎಂದು ಹೇಳುವಂತಹಾ ಶ್ರೀಮದ್ವಿದ್ಯಾಪ್ರಸನ್ನತೀರ್ಥರ ಅದ್ಭುತವಾದ ಕೃತಿ...
***