Friday 19 February 2021

ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು ankita prasanna


ಕೃಷ್ಣ:  ದೂರದಿ ನಿಲ್ಲೆಲೆ ಬಾಲೆ ಎನ್ನ
ಜಾರನು ಎಂದು ತಿಳಿದೆಯೋ

 ಗೋಪಿ: ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮ-
ಚಾರಿಯೆಂದರಿತೇನೋ ... ಕೃಷ್ಣಾ

ಕೃಷ್ಣ:  ಅಂಗಸಂಗ ಯಾಚಿಸಲು ಎನ್ನ ಅ-
ನಂಗನೆಂದು ಭ್ರಮಿಸಿದೆಯಾ.. ಗೋಪೀ

ಗೋಪಿ: ಸಂಗದಿಂದ ಪಾಪ ಭಂಗಮಾಡುವ ಅ-
ನಂಗ ಜನಕನೆಂದರಿತೇನೋ .. ಕೃಷ್ಣಾ..

ಕೃಷ್ಣ: ಪತಿಯನು ಬಿಟ್ಟು ನೀ ಬಂದು ಬಾಲೆ 
ಪತಿತಳಾಗದಿರು ಇಂದು ಗೋಪೀ ..

ಗೋಪಿ:  ಪತಿತಪಾವನ ಜಗತ್ಪತಿಯು ಎನಗೆ ನೀನು ಪತಿಯೆಂದು ತಿಳಿದು ಬಂದಿರುವೆ  .. ಕೃಷ್ಣಾ..

ಕೃಷ್ಣ:  ನಿಂದಿಸರೇ ನಿನ್ನ ಜನರು ಬಾಲೆ
ಹಿಂದು ಮುಂದು ನುಡಿಗಳಲಿ.. ಗೋಪೀ..

ಗೋಪಿ: ಮುಕುಂದನ ಪ್ರಿಯಳನು ನಿಂದಿಪ ಜನರೆಲ್ಲಾ
ಮಂದಮತಿಗಳು ಅಲ್ಲವೇನೋ ಕೃಷ್ಣಾ..

ಕೃಷ್ಣ: ನಿನ್ನ ನಡತೆ ತರವಲ್ಲ ಬಾಲೆ 
ಚನ್ನಾಗಿ ಯೋಚಿಸು ಎಲ್ಲಾ ಬಾಲೆ.... 

ಗೋಪಿ: ಇನ್ನು ತಾಳಲಾರೆ ಕನ್ಯೆಯ ಮ್ಯಾಲೆ ಪ್ರ-
ಸನ್ನ ನಾಗೋ ಶ್ರೀಕೃಷ್ಣಾ.... ಕೃಷ್ಣಾ....
********


ಶ್ರೀಕೃಷ್ಣ- ಗೋಪಿಯರ ಸಂವಾದ

ಶ್ರೀಕೃಷ್ಣನು ಮನಸ್ಸಿಗೆ ಚುಚ್ಚುನುಡಿಗಳ ಮುಖಾಂತರ ಎಚ್ಚರಿಕೆಯನ್ನು ನೀಡುತ್ತಾ, ಅಂದರೆ ಎಷ್ಟೇಜನ ಬಾಂಧವರಿದ್ದರೂ ನಿಜವಾದ ಬಂಧು ತಾನೇ ಜೀವರಿಗೆ ಅಂತ ತಿಳಿಸುವ,  ತನ್ನ ಪಾದಾರವಿಂದಗಳಲ್ಲಿ ಮನಸ್ಸನ್ನು ನೆಲೆಗೊಳ್ಳಿಸಿಕೊಳ್ಳುವುದೇ ಮೋಕ್ಷ ಎಂದು ಹೇಳುವಂತಹಾ ಶ್ರೀಮದ್ವಿದ್ಯಾಪ್ರಸನ್ನತೀರ್ಥರ ಅದ್ಭುತವಾದ ಕೃತಿ...
***

No comments:

Post a Comment