Showing posts with label ನೆನಸದಿರು ಎಲೆ ಮನವೆ ಅನುದಿನ ವಿಷಯ ಸುಖವು ಎಂದು vijayaramachandra vittala. Show all posts
Showing posts with label ನೆನಸದಿರು ಎಲೆ ಮನವೆ ಅನುದಿನ ವಿಷಯ ಸುಖವು ಎಂದು vijayaramachandra vittala. Show all posts

Friday 6 August 2021

ನೆನಸದಿರು ಎಲೆ ಮನವೆ ಅನುದಿನ ವಿಷಯ ಸುಖವು ಎಂದು ankita vijayaramachandra vittala

 ..


Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ನೆನಸದಿರು ಎಲೆ ಮನವೆ ಅನುದಿನ

ವಿಷಯ ಸುಖವು ಎಂದು

ಕನಸಿಲಾದರು ಸ್ಮರಿಸಲಾಗದು ಮನವೆ ಪ


ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ

ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ


ಅಶನ ವಸನ ಪಶುವ್ರಾತ ವಶವಿರುವಾಭರಣ

ಹಸನಾದ ರಥ ಪದಾತಿಗಳು

ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1


ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ

ಶುದ್ಧ ರೂಪ ಲಾವಣ್ಯ ಯೌವನ

ತಿದ್ದಿದ ಮತಿಯೆ ಸಿರಿ ಶೌರ್ಯ ಪರಾಕ್ರಮ

ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2


ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ

ವೆಚ್ಚವಾಗಿ ಪೋಪವೊ ಧನವಲ್ಲದೆ

ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ

ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3

ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ

ಕರ್ತಭಾವದಿ ಸತತ ಮಾಡೆ

ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ

ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4


ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ

ಜ್ಞಾನಿಗಳಿಗೆ ಶಿರಬಾಗಲೊಲ್ಲಿ

ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ

ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5


ಜ್ಞಾನ ಭಕ್ತಿ ವೈರಾಗ್ಯವನು ಅನುವಾಗಿ

ಕೈಗೊಳುವುದೇ ಮಾನ

ಅನ್ಯಾಧೀನವೆನ್ನದೆಂಬುದೇ ಲಜ್ಜಾ

ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ

ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6


ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ

ವರ ಯೋಗ ಭೋಗದಲ್ಲಿ

ವರ ರಾಮಚಂದ್ರವಿಠಲರಾಯನು ನಿನ್ನ

ದುರಿತ ಕಳೆದು ಪಾಲಿಸುವ7

***