Showing posts with label ತಿಳಿದವನೇ ಪೂರ್ಣಾ ತಿಳಿವಿಕೆಯೊಳು ತನ್ನಯ ಖೂನಾ gurumahipati. Show all posts
Showing posts with label ತಿಳಿದವನೇ ಪೂರ್ಣಾ ತಿಳಿವಿಕೆಯೊಳು ತನ್ನಯ ಖೂನಾ gurumahipati. Show all posts

Wednesday 1 September 2021

ತಿಳಿದವನೇ ಪೂರ್ಣಾ ತಿಳಿವಿಕೆಯೊಳು ತನ್ನಯ ಖೂನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ತಿಳಿದವನೇ ಪೂರ್ಣಾ | ತಿಳಿವಿಕೆಯೊಳು ತನ್ನಯ ಖೂನಾ ಪ 


ತಿಳಿವಿಕೆ ತಿಳಿವದು ಯರಡಿಲ್ಲೆಂದು | ತಿಳಿದೇ ನರ ಬಾಹಂಭ್ರಮ ಜರಿದು 1 

ವೇದಾಂತ ಸಾರದ ವಾಜ್ಯನು-ಭವನು | ಸಾಧು ಜನರ ದಯದಲಿ ಪಡೆದನು 2 

ಜಲಧಿಯೊಳಗ ಲಹರಿಗಳೇಳ್ವೆಂತೆ | ಸಲೆ ಆತ್ಮನಿಂದಲಿ ಜಗದುದ್ಭವಂತೆ 3 

ಪೂರ್ವಾರ್ಧದ ಬಿಸಿಲಿನ ನೆರಳೆಂದು | ದೋರ್ವ ಸಂಸಾರವು ಸ್ಥಿರವಲ್ಲೆಂದು 4 

ಗುರುಮಹಿಪತಿ ಚರಣಕ ತಲೆವಾಗಿ | ಬೆರೆದು ಸತ್ವದೊಳಗ ರಜತಮ ನೀಗಿ 5

***