Showing posts with label ಭಕ್ತಜನ ಪಾಲಕ ಭಕ್ತಿಸುಖದಾಯಕ ಮುಕ್ತೀಶ vijaya vittala BHAKTAJANA PAALAKA BHAKTI SUKHA DAAYAKA MUKTEESHA. Show all posts
Showing posts with label ಭಕ್ತಜನ ಪಾಲಕ ಭಕ್ತಿಸುಖದಾಯಕ ಮುಕ್ತೀಶ vijaya vittala BHAKTAJANA PAALAKA BHAKTI SUKHA DAAYAKA MUKTEESHA. Show all posts

Wednesday 16 October 2019

ಭಕ್ತಜನ ಪಾಲಕ ಭಕ್ತಿಸುಖದಾಯಕ ಮುಕ್ತೀಶ ankita vijaya vittala BHAKTAJANA PAALAKA BHAKTI SUKHA DAAYAKA MUKTEESHA



ಭಕ್ತಜನ ಪಾಲಕ – ಭಕ್ತಿಸುಖದಾಯಕ
ಮುಕ್ತೀಶ ದೀನಬಂಧು ಕೃಷ್ಣ
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ
ಸತ್ಯವತಿ ಸುತÀನೆ ಕಾಯೋ ಕೃಷ್ಣ

ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ |
ಆನಂದದಲಿ ನಿಲಿಸೊ ಕೃಷ್ಣ ||
ದೀನಜನ ಮಂದಾರ ನೀನೆಂದು ನಂಬಿದೆನೊ |
ಸಾನುರಾಗದಲಿ ಕಾಯೋ ಕೃಷ್ಣ ||1||

ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ |
ಭ್ರಷ್ಟನಾಗಿ ಪೋದೆನೋ ಕೃಷ್ಣ ||
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ |
ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ||2||

ಅಜಜನಕ ಗಜವರದ ಭುಜಗಶಯನನೆ ನಿನ್ನ |
ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ ||
ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ ||3||
**********