Showing posts with label ವಾರಣಾಶ್ಯನ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ shyamasundara. Show all posts
Showing posts with label ವಾರಣಾಶ್ಯನ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ shyamasundara. Show all posts

Wednesday 1 September 2021

ವಾರಣಾಶ್ಯನ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ ankita shyamasundara

 ..

ಪದ್ಯ

ಅಥಃ ಪ್ರಥಮೋಧ್ಯಾಯ

ವಾರಣಾಶ್ಯನ ಪಾದ ವಾರಿಜಕೆರಗುತ

ನೀರಜ ಮುಖಿ ಸರಸ್ವತಿಯಾ ||

ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ

ನಾರಾಯಣ ಚಾರು ಕಥೆಯಾ ಪ


ಸುರಮುಖಿವಂದಿತ ಸರಸಿಜ ಭವಪಿತ

ಕರುಣ ಶರಧಿ ಕರಿವರದಾ |

ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು

ವರವ ಪಾಲಿಸು ದಯದಿಂದ 1


ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ

ಪುರಹರ ವಂದಿತೆ ಖ್ಯಾತೆ ||

ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ

ಗರಿಯೆ ವರವ ಸುಖದಾತೆ 2


ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ

ನೆರೆನಂಬಿದೆನು ಮುದಿಂದ ||

ಹರಿಸುಚರಿತ್ರವು ಅರುಹಲು ಎನ್ನಗೆ

ಸ್ಥಿರ ಬುದ್ಧಿಕೊಡು ವಾಯುಕಂದ 3


ಗಿರಿಜೇಶ ಶಚಿಪತಿ ಸುರತತಿಗೆರಗುವೆ

ಪರಮ ಸುಭಕ್ತಿ ಪೂರ್ವಕದಿ ||

ಹರಿದಾಸ ವರ್ಗಕೆ ಶುಭನೀಡಲೆನಗೆಂದು

ಶಿರಬಾಗಿ ಬೇಡುವೆ ಮನದಿ 4


ಘನತರ ನೈಮಿಷವನದೊಳು ವಾಸಿಪ

ಮುನಿ ಸೂತನಲ್ಲಿಗೆ ಬಂದು |

ವಿನಯದಲಿ ವಿಜ್ಞಾಪನ ಮಾಡಿಕೊಂಡರು

ಶೌನಕಾದಿಗಳೆಲ್ಲ ನಿಂದು 5


ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ |

ವ್ರತದಾವದ್ಹೇಳಿರೆನುತ ||

ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು

ಕಥಿಸಿದನಾಗೆತಿ ಸೂತಾ 6


ಛಂದದಿ ಕೇಳಿರಿ ಒಂದೆ ಮನದಿ ಈಗಾ |

ನಂದದಿ ನಾರದ ತಾನೂ ||

ಹಿಂದಕ್ಕೆ ಈತೆರ ನಂದನ ಗೋ

ವಿಂದನ ಪ್ರಶ್ನೆ ಮಾಡಿದನೂ 7


ಕಾರುಣ್ಯದಿಂದಲಿ ಸಾರಸೋದ್ಭವಕು |

ಮಾರ ನಾರದ ಮುನಿವರಗೆ ||

ವಾರಿಜಾಂಬಕನಾದ ಶೌರಿ ಪೇಳಿದ ಕಥೆ

ಸಾಧುವೆ ಮೋದದಿ ನಿಮಗೆ 8


ವರಸುರ ಲೋಕಾದಿ ಚರಿಸುತ್ತನಾರದ |

ಹರುಷದಿ ಭೂಮಿಗೆ ಬರಲು ||

ನರರತಿ ಕಷ್ಟದಿ ಮರುಗುವದಂ ನೋಡಿ |

ಪೊರೆಟರು ಹರಿಗ್ಹೇಳಿ ಕೊಳಲು 9


ಪದುಮಜ ಸುತ ನಾರದ ಮುನಿ ವೇಗದಿ |

ವಿದುಧರ ವಂದಿತನಾದ ||

ಯದುಪನಲ್ಲಿಗೆ ಬಂದು ಮುದಮನದಿಂದಲಿ |

ವಿಧ ವಿಧದಲಿ ಸ್ತುತಿಗೈದಾ 10


ನಿಗಮಕೆ ನಿಲುಕದ ಅಗಣಿತ ಮಹಿಮನೆ

ತ್ರಿಗೂಣ ವರ್ಜಿತ ತ್ರಿವಿಕ್ರಮನೆ ||

ಪೊಗಳುವ ತವ ಪದಯುಗಕೆರಗುತ ನಾನು

ಜಗದುತ್ವತ್ತಿ ಕಾರಣನೆ 11


ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ |

ಮಗನ ಮಗಳ ಮದುವ್ಯಾದಿ ||

ಮಗನ ಮಗನ ವರಪಡೆದಾತನ ಜೈಸಿ

ಮಗನ ಮಗನ ನೀನು ತಂದಿ 12


ಸಿಂಧುಜರಿಪ್ರಸಖ ನಂದನ ಕೊಂದನ |

ತಂದೆಯ ತಂದೆಯಾ ಸುತೆಯಾ ||

ನಂದಿನಿಯಳಿಗಾಗಿ ನೊಂದಿದಿ ನೀ ನರ

ರಂದದಿ ಕವಿಗಣಗೇಯಾ 13


ಘನ್ನ ಮಹಿಮ ನಿನ್ನ ಅನಂತ ಚರಿಯವ

ಬಣ್ಣಿಸ ಬಲ್ಲೆನೆ ದೇವಾ ||

ಪನ್ನಗರಾಜಗಾಗಣ್ಯವಾಗಿಪ್ಪುದು

ಮನ್ನಿಸು ಎನ್ನ ಬಿನ್ನಪವಾ 14


ಬಾ ಮುದ್ದು ನಾರದನೆ ಬಾ ಮುನಿವರ್ಯನೆ

ಬಾ ಮೂರು ಭುವನ ಸಂಚಾರಿ

ನೇಮದಿಂದಲಿ ನಿನ್ನ ಕಾಮಿತ ಪೇಳೀಗ

ಪ್ರೇಂದಿಂದಲಿ ವೀಣಾಧಾರಿ 15


ಮುರಹರ ನಿನ್ನಗೆ ಅರಿಯದ ವಾರ್ತೆಯು |

ಧರಣಿ ತ್ರಯದಿ ಉಂಟೇನೋ ||

ನರರತಿ ಕಷ್ಟದಿ ಮರುಗುತಲಿಪ್ಪರು

ಹರಿಪೇಳಿದಕುಪಾಯವನು 16


ಸತ್ಯಲೋಕೇಶನ ಪುತ್ರನೆ ನಿನ್ನಯ |

ಉತ್ತಮ ಪ್ರಶ್ನೆಗೆ ನಾನು ||

ಅತ್ಯಾನಂದದಿ ಉತ್ತರ ಪೇಳುವೆ

ಚಿತ್ತೈಸು ಮುನಿವರ ನೀನು 17


ನಾರದ ಶ್ರೀ ಸತ್ಯನಾರಾಯಣ ವ್ರತ

ಧಾರುಣಿಯೊಳಗಿನ ಜನರು

ಆರು ತಮ್ಮ ಪರಿವಾರದಿಂದಲಿ ಗೈಯ್ಯೆ

ಭೂರಿ ಸೌಖ್ಯದಿ ಮೆರೆವರೋ 18


ದೇವನೆ ಈ ನಿನ್ನ ಸೇವಕನಿಗೆ ಸತ್ಯ ||

ದೇವನೆ ವ್ರತದ ವಿಧಾನ ||

ಸಾವಧಾನದಿ ಪೇಳು ಭಾವ ಜಪಿತ ಏಕೋ

ಭಾವದಿ ಕೇಳುವೆ ಮುನ್ನ 19


ಬುಧನುತ ನಾರದ ಘೃತಕ್ಷೀರ ಶರ್ಕರ |

ಕದಳಿ ಗೋಧೂ ಮಾದಿಗಳನು ||

ಪದುಳದಿಂದಲಿ ಸುಪಾಕಗೈದು ಮೇಣ್

ವಿಧ ವಿಧ ಪಕ್ವಾದಿಗಳನು 20


ಪರಮ ಭಕ್ತಿಯಲಿಂದ ಪರಿವಾರ ಸಹಿತದಿ

ಧರುಣಿಸುರನ ಪರಿಮುಖದಿ

ತುರಧೂಳಿಕಾಲದಿ ಪರಿಪರಿ ಪೂಜಿಸಿ

ಹರಿಗರ್ಪಿಸಲಿ ಬೇಕು ಮುದದಿ 21


ಈರೀತಿಗೈವರ ಕೋರಿಕೆಯನು ದಯ |

ವಾರಿಧಿ ಶಾಮಸುಂದರನೂ ||

ಪೂರೈಸಿ ಪ್ರತಿ ನಿತ್ಯ ವಾರಿಜಸಹಿತದಿ

ಸೇರಿ ತಾ ನಲಿದಾಡುತಿಹನೂ 22

ಇತಿ ಪ್ರಥಮೋಧ್ಯಾಯ ಸಂಪೂರ್ಣಂ

***


ಅಥಃ ದ್ವಿತೀಯೋಧ್ಯಾಯಃ

ಅತಿ ಮೋದದಿಂದಲಿ ಮತಿಯುತರೆ ಈಗ

ಪೃಥವಿಯೊಳಗೆ | ಪೂರ್ವದಲಿ ||

ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ

ಕಥಿಸುವೆ ಹಿತದಿಂದ ಕೇಳಿ 1


ಕಾಶಿಯೊಳಗೆ ಒಬ್ಬ ಭೂಸುರ ಬಡತನ

ಕ್ಲೇಶದಿ ವಾಸಿಸುವದನು ||

ಶ್ರೀಶ ಅವನ ನೋಡಿ ಪೋಷಿಸಲು

ವೃದ್ಧ ವೇಷದಿ ಮಾತನಾಡಿಸಿದನು 2


ಭೂತವಕದಿ ವಿಪ್ರನಾಥನೆ ತವ

ಮುಖ ಪಾಥೋಜ ಬಾಡಿದ ಬಗೆಯಾ

ಈ ತೆರ ದುಃಖದಿ ನೀ ತಿರಗುವಂಥ

ಮಾತು ಪ್ರೀತಿಲಿ ಪೇಳಯ್ಯಾ 3


ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ |

ಸ್ಥಿತಿಯಾ ಲಾಲಿಸು ಮನದಿಂದಾ ||

ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ

ಅತಿ ಬಡತನ ದೆಶೆಯಿಂದಾ 4


ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ |

ಥಟ್ಟನೆ ನೀ ಪೇಳುಪಾಯಾ ||

ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ

ಮುಟ್ಟಿ ಸೇವಿಪೆ ಮಹರಾಯಾ 5


ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ |

ಕಡಲಜಪತಿ ಕವಿಗೇಯಾ ||

ಕಡುದಯದಲಿ ಪೇಳ್ದ ಬಡತನ ಕಳೆಯುವ

ಪೊಡೆವಿಯೊಳಿದ್ದ ಉಪಾಯಾ 6


ಸಾರುವೆ ಕೇಳಯ್ಯ ಮಾರಜನಕ ನಿಜ |

ನಾರಾಯಣನ ಸು ವ್ರತವಾ

ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು

ದಾರಿದ್ರ್ಯ ಹರಿ ದೂರಗೈವಾ 7


ಮುದುಕನ ನುಡಿಕೇಳಿ ಮುದಮನದಿಂದಲಿ

ಸದನಕ್ಕೆ ದ್ವಿಜ ಬಂದು ತಾನೂ

ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ

ವಿಧ ವಿಧದಲಿ ಮಾಡಿದನೂ 8


ಹರುಷದಿ ಈ ರೀತಿ ಧರಣಿ ದೇವನು ಮಾಡೆ |

ಶಿರಿಸತಿ ಸುತರಿಂದ ತಾನೂ ||

ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ

ಹರಿಪುರ ಪಥ ಹಿಡಿದನೂ 9


ಸೂತರೆ ಅತ್ಯಂತ ಕೌತುಕವಾಗಿಹ

ಧಾತ ಪಿತನ ಈ ವ್ರತವು

ಭೂತಳದೊಳಗೆಂತು ಖ್ಯಾತಿಯ ಪೊಂದಿತು

ಪ್ರೀತಿಲಿ ಪೇಳಿರಿ ನೀವು 10


ಪ್ರತಿ ಮಾಸದಲ್ಲಿ ಆ ಪೃಥಿವಿ ದೇವನು ತನ್ನ

ಸತಿಸುತ ಪರಿವಾರ ಸಹಿತಾ

ಅತಿ ಹಿತದಲಿ ಮನೋರಥ ಪೂರೈಸುವ

ಈ ವ್ರತ ಮಾಡುತಿರಲಾಗತ್ವರಿತಾ 11


ಚರಣನೋರ್ವನು ಶಿರದಿ ಕಾಷ್ಟಭಾರವ

ಧರಿಸಿ ಮಾರಲು ಬೀದಿಗಳಲಿ

ಬರುತಿರೆ ಮಾರ್ಗದಿ ಧರಣಿದೇವನೆ ಮಂ

ದಿರ ಕಂಡ ಪರಮ ಮೋದದಲಿ 12


ಶ್ರೀನಿವಾಸನ ಘನಧ್ಯಾನದಿಂರ್ಚಿಪ

ಕ್ಷೋಣಿ ಸುರನ ನೋಡಿ ಜವದಿ

ಆನಂದದಲಿ ಶೂದ್ರ ಮಾನವ ಕೇಳಿದ

ಏನಿದೆಂದೆನು ತಲಾಕ್ಷಣದಿ 13


ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು

ಭದ್ರದ ವ್ರತದ ವಿವರವಾ

ಶುದ್ಧ ಮನದಿ ಚರಣೋಧ್ಭವ ಗೈದನಿ

ಶುದ್ಧನ ಪಾದಾರ್ಚನವಾ 14


ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ

ಪರಮ ಸೌಜನ್ಯದಿ ಇದ್ದು ಕೊನೆಗೆ

ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ

ಶಿರಿಶಾಮಸುಂದರನ ಪುರಿಗೆ 15


ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ

***

ಅಥಾಃತೃತೀಯೋಧ್ಯಾಯ

ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ

ಪೆಸರಾದ ಇನ್ನೊಂದು ಕಥೆಯಾ

ಉಸುರುವೆ ಕೇಳ್ವರ ವ್ಯಸನವು ಪರಿಹಾರ

ಪುಸಿಯಲ್ಲಿ ಈ ನುಡಿ ಖರಿಯಾ 1


ವರ ಉಲ್ಕಮುಖನೆಂಬ ಧರಣೀಶನೋರ್ವನು

ಹರುಚದಿಂದಲಿ ತನ್ನ ಹಿತದಾ

ತರುಣಿಯಿಂದೊಡಗೂಡಿ ಶರಧಿ ತೀರದಿ ನಿಜ

ಹರಿಯನ್ನು ಪೂಜಿಸುತಿರ್ದ 2


ಕ್ಷೋಣಿಪಾಲಕನಿದ್ದ ಆ ನದಿತೀರದಿ |

ವಾಣಿಜ್ಯ ಮಧುನಾಯಕನೂ ||

ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ

ಧಾನವೇನೆಂದು ಕೇಳಿದ 3


ಭೂಮಿಪಾಲಕ ಮಧುನಾಮಕ ವೈಶ್ಯನ

ಆ ಮೃದು ನುಡಿಕೇಳಿ ಜವದಿ

ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ

ನೇಮವ ಪೇಳ್ವ ಸಮ್ಮುದದಿ 4


ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ

ಲಕ್ಕುಮಿಯುತ ಮುದದಿಂದ

ಮಕ್ಕಳೆನಗಾಗಲು ಚಕ್ರಿಯ ಸುವೃತ

ಅಕ್ಕರದಲಿ ಮಾಳ್ಪೆನೆಂದ 5


ಈ ರೀತಿ ಧೃಡ ಬ್ಯಾಪಾರಿಯು ತಾಗೈದು

ಶೌರಿ ಪ್ರಸಾದ ಸ್ವೀಕರಿಸಿ ||

ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ

ನಾರಿಯ ಮುಂದೆ ವಿಸ್ತರಿಸಿ 6


ಪತಿಯ ವಚನಕೇಳಿ ಸತಿ ಶಿರೋಮಣಿ ಲೀಲಾ

ವತಿಯು ತನ್ನ ಮಂದಿರದಿ ||

ಹಿತದಿರುತಿರೆ ಶಿರಿ ಪತಿ ಕರುಣದಿ ಗರ್ಭ

ವತಿ ತಾನಾದಳಾಕ್ಷಣದಿ 7


ಹತ್ತನೆ ಮಾಸದ ಉತ್ತಮ ಪುತ್ರಿಯ

ಪೆತ್ತಳು ಆ ನಾರಿ ತಾನೂ ||

ಅತ್ಯಂತ ಸನ್ಮುದ ಚಿತ್ತನಾಗಿ ಸಾಧು

ಮರ್ತನು ಹರಿವ್ರತವನ್ನು 8


ಸುತೆಯು ಪುಟ್ಟದ ಮೇಲೆ ಸತಿ ಲೀಲಾವತಿ ತನ್ನ

ಪತಿಗಭಿವಂದಿಸಿ ನಿಂದು ||

ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು

ಪತಿ ವ್ರತ ಮಾಡಬೇಕೆಂದು 9


ಸುದತಿಯ ನುಡಿಕೇಳಿ ಮಧುನಾಮಕ ಸಾಧು

ವಿಧಿಸಿದ ಸುತೆ ಕಲಾವತಿಯಾ ||

ಮದುವೆಯ ಕಾಲದಿ ಉದುಪನರ್ಚಿಪೆನೆಂದು

ಮುದದಿಂದ ಪೇಳ್ದನುಪಾಯಾ 10


ಪರಿಪರಿ ಸೌಖ್ಯದಿಂದಿರುತಿರೆ ವೈಶನ

ತರುಳೆಗೆ ಪೂರ್ಣಯೌವನವು |

ಬರಲು ಮಾಡಿದ ತಕ್ಕವರ ತಂದು ಲಗ್ನವ

ಮರೆತು ಬಿಟ್ಟನು ಹರಿವ್ರತವಾ 11


ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ

ಜಾಮಾತನೊಡನೆ ವ್ಯಾಪಾರಾ

ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ

ಆ ಮಹಾಪುರ ರತ್ನಸಾರಾ&ಟಿbs (incomplete?)

***