Showing posts with label ಶರಣು ಹೊಕ್ಕೆನು ಕರುಣಾಂಬುಧಿಯೇ ಕಾಯೊ devapura lakshmikanta. Show all posts
Showing posts with label ಶರಣು ಹೊಕ್ಕೆನು ಕರುಣಾಂಬುಧಿಯೇ ಕಾಯೊ devapura lakshmikanta. Show all posts

Monday 2 August 2021

ಶರಣು ಹೊಕ್ಕೆನು ಕರುಣಾಂಬುಧಿಯೇ ಕಾಯೊ ankita devapura lakshmikanta

ಶರಣುಹೊಕ್ಕೆನು ಕರುಣಾಂಬುಧಿಯೇ ಕಾಯೊ ಪ


ಸುರಪುರ ನಿಲಯ ಲಕ್ಷ್ಮೀಪತಿಯೇ ಅ.ಪ


ಪುಂಡುದಾನವರ ಶಿರವನೆ ಛೇದಿಸಿ ಮುಂ

ಕೊಂಡಸುರ ದಶಾನನನಾ

ದಿಂಡುದರಿದು ರಕ್ಕಸರ ಸಂಹರಿಸಿ

ಖಂಡ ವಿಭೀಷಣಗುದ್ದಂಡಪದವಿಯ ಇತ್ತನೆಂದು 1


ಸುರಪನ ವರ ತನುಜನ ರಥದೊಳು ನಿಂದು

ಕರುಣದಿಂದಲೆ ತುರಗವ ಪೊಡೆಯೆ

ಕುರುಕುಲ ಚತುರ್ಬಲವ ಸಂಹರಿಸಿಯೆ

ಉರಗಶರವು ಬರೆ ನರನ ಕಾಯ್ದನೆಂದು 2


ನರಮೃಗರೂಪಿನಲಿ ಹಿರಣ್ಯಕಶಿಪುವಿನ

ಉರವ ಬಗೆದು ಶರಣನ ಪೊರೆಯೆ

ಸುರಪುರವಾಸನೆ ಶ್ರೀಲಕ್ಷ್ಮೀ ಅರಸನೆ

ದುರುಳ ನೆಗಳ ಕೊಂದು ಕರಿಯ ಕಾಯ್ದನೆಂದು 3

***