Showing posts with label ನಾಡ ದೈವಗಳ ಪೂಜೆಯನು ಮಾಡಿದರೆ vijaya vittala. Show all posts
Showing posts with label ನಾಡ ದೈವಗಳ ಪೂಜೆಯನು ಮಾಡಿದರೆ vijaya vittala. Show all posts

Wednesday 4 August 2021

ನಾಡ ದೈವಗಳ ಪೂಜೆಯನು ಮಾಡಿದರೆ ankita vijaya vittala

 ನಾಡ ದೈವಗಳ ಪೂಜೆಯನು ಮಾಡಿದರೆ |

ಕೇಡಲ್ಲದೆ ಮತ್ತೆ ಕೈವಲ್ಯವುಂಟೇ


ಕೊಳಚಿ ನೀರನು ದಾಟಲರಿಯದ ಮನುಜಗೆ

ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- |

ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು |

ಅಳಿಯದಂತೆ ದಡಕೆ ತರಬಲ್ಲನೇ ||1||


ಕತ್ತಲೆಗಂಜುವನ ಕರೆತಂದು ಶೃಂಗರಿಸಿ |

ಉತ್ತಮದ ವಾಜಿವಾಹನವ ಮಾಡಿ ||

ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- |

ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ ||2||


ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- |

ಮನ ವಿಡಿದು ಭಜಿಸಿದರೆ ಏನಾಗದೊ ||

ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ |

ವನಜಪದ ನೆನೆದರೆ ಮುಕುತಿಯುಂಟು ||3||

***

pallavi


nADa deivagaLa pUjeyenu mADidare kEDallade matte kaivalyavuNTE


caraNam 1


koLace nIranu dATalariyada manujage niluvudda dravya koDuve ennanA

jalanidhiya uttarisi koDu endare avanu aLIyadante daDake taraballane


caraNam 2


kattaleganjuvana karetandu shrangarisi uttamada vAji vAhanava mADi

kattiyenu karadalli koTTu ripu parivAra datta onaDi iTTU baraballane


caraNam 3


tanage bandApattu pariharisi koLLade paramanaviDidu bhajisidare EnAgadO

binagu deivaragaNDa shrI vijayaviThalana vana japada nenedare mukutiyuNTu

***

ನಾಡ ದೈವಗಳ ಪೂಜೆಯನು ಮಾಡಿದರೆ | 

ಕೇಡಲ್ಲದೆ ಮತ್ತೆ ಕೈವಲ್ಯವುಂಟೇ ಪ


 ಕೊಳಚಿ ನೀರನು ದಾಟಲರಿಯದ ಮನುಜಗೆ ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- | ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು | ಅಳಿಯದಂತೆ ದಡಕೆ ತರಬಲ್ಲನೇ 1 

ಕತ್ತಲೆಗಂಜುವನ ಕರೆತಂದು ಶೃಂಗರಿಸಿ | ಉತ್ತಮದ ವಾಜಿವಾಹನವ ಮಾಡಿ || ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- | ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ 2 

ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- | ಮನ ವಿಡಿದು ಭಜಿಸಿದರೆ ಏನಾಗದೊ || ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ | ವನಜಪದ ನೆನೆದರೆ ಮುಕುತಿಯುಂಟು 5

***