Showing posts with label ಮನ್ಮಥನಯ್ಯನ ಮನದಲಿ ಸ್ಮರಿಸಿರೊ kamalanabha vittala. Show all posts
Showing posts with label ಮನ್ಮಥನಯ್ಯನ ಮನದಲಿ ಸ್ಮರಿಸಿರೊ kamalanabha vittala. Show all posts

Thursday 5 August 2021

ಮನ್ಮಥನಯ್ಯನ ಮನದಲಿ ಸ್ಮರಿಸಿರೊ ankita kamalanabha vittala

 ..

kruti by Nidaguruki Jeevubai


ಮನ್ಮಥನಯ್ಯನ ಮನದಲಿ ಸ್ಮರಿಸಿರೊ

ಮನ್ಮಥ ನಾಮ ಸಂವತ್ಸರದಿ ಪ


ಸುಮ್ಮನೆ ಕಾಲವ ಕಳೆಯುವದೇತಕೆ

ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ


ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ

ಒಂದೆ ಸ್ಥಳದಿ ಭಜನೆಯಮಾಡಿ

ಇಂದಿರಾರಮಣನ ಚಂದದಿ ಪೊಗಳಲು

ಬಂದ ದುರಿತಗಳ ಪೊಂದಿಸನೆಂದೆಂದು 1


ಮಾಕಮಲಾಸನ ಲೋಕದ ಜನರಿಗೆ

ತಾಕಾಣಿಸಿ ಕೊಳ್ಳದೆ ಇಹನು

ಶ್ರೀಕರ ಸಲಹೆಂದು ಏಕ ಭಕುತಿಯಲಿ

ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ 2


ಅತಿಶಯದಿಂದಲಿ ಸತಿಸುತರೆಲ್ಲರು

ಪತಿತಪಾವನನ ಕೊಂಡಾಡುತಲಿ

ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ

ಸತತ ಸುಕ್ಷೇಮವಿತ್ತು ಪಾಲಿಸುವಂಥ 3


ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ

ಜನರನು ಸಂತೈಸುತಲಿಹನು

ಹನುಮ ಭೀಮ ಮಧ್ವಮುನಿಗಳ ಸೇವಿಪ

ಮನುಜರ ಮನೋರಥಗಳನೆ ಪೂರೈಸುವೊ 4


ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ

ಕ್ಷಿಪ್ರದಿಂದಲಿ ಸೇವಿಪ ನರನ

ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು

ಸಂತೈಸುವ ಸತ್ಯಸಂಕಲ್ಪ ಶ್ರೀ5


ತಾಳ ತಂಬೂರಿ ಸುಸ್ವರಗಳಿಂದಲಿ ಬಹು

ನೇಮದಿಂದಲಿ ಸರುವರು ಕೂಡಿ

ಗಾನಲೋಲನ ಭಜನೆಯ ಮಾಡುತ ಸತ್ಯ

ಸ್ವಾಮಿಯ ಗುಣಗಳ ಪೊಗಳುವ ಸುಜನರು 6


ಸಡಗರದಿಂದಲಿ ಕಡಲೊಡೆಯನ ಗುಣ

ಪೊಗಳುತ ಹಿಗ್ಗುತ ಅಡಿಗಡಿಗೆ

ಕಡಲ ಶಯನ ಕಮಲನಾಭ ವಿಠ್ಠಲನೆಂದು

ಬಿಡದೆ ಭಜಿಸುವರ ತೊಡರು ಬಿಡಿಸುವ ಶ್ರೀ 7

***