Showing posts with label ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ purandara vittala RUNAVEMBA SOOTAKAVU BAHU BAADHE BADISUTIDE. Show all posts
Showing posts with label ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ purandara vittala RUNAVEMBA SOOTAKAVU BAHU BAADHE BADISUTIDE. Show all posts

Tuesday 3 December 2019

ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ purandara vittala RUNAVEMBA SOOTAKAVU BAHU BAADHE BADISUTIDE

ರಾಗ ಪುನ್ನಾಗವರಾಳಿ    ತಾಳ ಖಂಡಛಾಪು 

Audio by Vidwan Sumukh Moudgalya


ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ ॥ಪ॥
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ  ॥ಅ.ಪ॥

ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ ॥೧॥

ಅವನ ಒಡವೆಯ ತಂದು ದಾನ ಧರ್ಮವ ಮಾಡೆ
ಅವಗಲ್ಲದೆ ಪುಣ್ಯ ಇವಗ್ಯಾವುದು
ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ
ಇವನ ಜೀವನ ಬಾಡಿಗೆತ್ತಿನಂದದಲಿ ॥೨॥

ಆಳಿದೊಡೆಯನ ಮಾತು ಕೇಳಿ ನಡೆಯಲು ಬಹುದು
ಊಳಿಗವ ಮಾಡಿ ಮನದಣಿಯಬಹುದು
ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು
ಪೇಳಲಳವಲ್ಲ ಋಣದವಗೊಂದು ಸೊಲ್ಲ ॥೩॥

ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ
ಮೃತ್ಯು ಸೂತಕವು ಹನ್ನೊಂದು ದಿನಕೆ
ಮತ್ತೆ ಋಣ ಸೂತಕವು ಜನ್ಮಜನ್ಮಾಂತರಕೆ
ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ॥೪॥

ಬಂಧುಬಳಗದ ಮುಂದೆ ಬಹುಮಾನವು ಹೋಗಿ
ಅಂದವಳಿದೆನೊ ಈ ವಿಧ ಋಣದೊಳು
ಇಂದಿರಾರಮಣ ಶ್ರೀಪುರಂದರವಿಠಲನೆ 
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ  ॥೫॥
***

pallavi

ruNavemba sutakavu bahu bAdhe paDisutide

anupallavi

guNanidhiye nInenna ruNava pariharisO

caraNam 1

koTTavaru bandenna niSTurangaLanADi keTTa baigaLa baidu manadaNiyalu
diTTadanavanu biTTu kaLe gundidenayya shrSTikoDEyane enna ruNava pariharisO

caraNam 2

avana oDeveya tandu tAna dharmava mADe avanigallade puNya ivagyAvadu
avana oDavegaLinda tIrtta yAtreya mALpa ivana jIvana pADigettinandadali

caraNam 3

AlidoDeyana mAtu kELi naDeyalu bahudu Uligava mADi mana daNiya bahudu
kALagadi pokku kaDidADi jayisalu bahudu beLalavalla ruNadavagondu solla

caraNam 4

hetta sutaka hittu dinagaLige parihAra mrtyu sutakavu hannondu dinake
matte ruNa sutakavu janmantarake etta hOdaru biDade benhatti bahudu

caraNam 5

bandu baLagada munde bahumAnavu hOgi andavaLideno I vidha ruNadoLu
indirA ramaNa shrI purandara viTTalane indenna ruNava pariharisayya doreye
***


ರಾಗ ಮುಖಾರಿ ಅಟತಾಳ

ಋಣವೆಂಬ ಸೂತಕವು ಬಹು ಬಾಧೆ ಪಡಿಸುತಿದೆ
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೋ

ಕೊಟ್ಟವರು ಬಂದೆನ್ನ ನಿಷ್ಠುರಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೋ

ಅವನ ಒಡೆವೆಯ ತಂದು ದಾನ ಧರ್ಮವ ಮಾಡೆ
ಅವಗಲ್ಲದೆ ಪುಣ್ಯ ಇವಗ್ಯಾವದು
ಅವನ ಒಡವೆಗಳಿಂದ ತೀರ್ಥ ಯಾತ್ರೆಯ ಮಾಳ್ಪ
ಇವನ ಜೀವನ ಪಾಡಿಗೆತ್ತಿನಂದದಲಿ

ಆಳಿದೊಡೆಯನ ಮಾತು ಕೇಳಿ ನಡೆಯಲುಬಹುದು
ಊಳಿಗವ ಮಾಡಿ ಮನದಣಿಯಬಹುದು
ಕಾಳಗದಿ ಪೊಕ್ಕು ಕಡಿದಾಡಿ ಜೈಸಲುಬಹುದು
ಪೇಳಲಳವಲ್ಲ ಋಣದವಗೊಂದು ಸೊಲ್ಲ

ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ
ಮೃತ್ಯು ಸೂತಕವು ಹನ್ನೊಂದು ದಿನಕೆ
ಮತ್ತೆ ಋಣ ಸುತಕವು ಜನ್ಮಜನ್ಮಾಂತರಕೆ
ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು

ಬಂಧುಬಳಗದ ಮುಂದೆ ಬಹುಮಾನವು ಹೋಗಿ
ಅಂದವಳಿದೆನೊ ಈ ವಿಧ ಋಣದೊಳು
ಇಂದಿರಾರಮಣನೆ ಶ್ರೀಪುರಂದರವಿಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ
*********

ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |
ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ 
ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |
ತಡೆಯದಲೆ ತಂದು ಸಂತೋಷ ಪಡುವೆ ||
ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |
ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1

ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |
ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||
ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |
ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2

ಆಳಿದೊಡೆಯನ ಮಾತಕೇಳಿನಡೆಯಲು ಬಹುದು |
ಉಳಿಗವ ಮಾಡಿ ಮನದಣಿಯ ಬಹುದು ||
ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |
ಪೇಳಲಳವಲ್ಲ ಋಣದವಗೊಂದು ಸೊಲ್ಲ 3

ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |
ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||
ಉರಿವ ಉರಿಯೊಳು ಹೊಕ್ಕು 
ಹೊರ ಹೊರಟು ಬರಬಹುದು |
(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4

ಹೆತ್ತಸೂತಕಹತ್ತುದಿನಕೆ ಪರಿಹಾರವು |
ಮೃತ್ಯು ಸೂತಕವು ಹನ್ನೆರಡು ದಿನವು ||
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |
ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5

ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |
ಅವರಿಗಲ್ಲದೆ ಪುಣ್ಯ ಇವರಿಗುಂಟೆ ||
ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |
ಅವರಮನೆಬಾಡಿಗೆಯ ಎತ್ತಿನಂದದಲಿ6

ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |
ಕಂದಿ ಕುಂದಿದೆನಯ್ಯ ಕರುಣಾನಿಧೆ ||
ಇಂದಿರಾರಮಣ ಶ್ರೀ ಪುರಂದರವಿಠಲನೆ |
ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 
another version

ರಾಗ: ಕಾಂಬೋದಿ           ತಾಳ: ಅಟ್ಟ

ಋಣವೆಂಬ ಪಾತಕವು ಬಹು ಬಾಧೆ ಪಡಿಸುತಿದೆ || ಪ ||
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ || ಅ.ಪ ||

ಒಡಲಿನಾಸೆಗೆ ಪರರ ಒಡವೆಗಳನೆ ತಂತು
ಬಿಡದೆ ವೆಚ್ಚವ ಮಾಡಿ ತೋಷಪಡುವೆ
ಕೊಡುವ ವೇಳೆಗವರ ಕೆಡುನುಡಿಗಳನು ನುಡಿವೆ
ಕಡು ಮಹಾಪಾತಕವ ಪರಿಹರಿಸೊ ಹರಿಯೆ || ೧ ||

ಕೊಟ್ಟವರು ಬಂದೆನ್ನ ನಿಷ್ಠೂರಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ || ೨ ||

ಅಳಿದೊಡೆಯನ ಮಾತು ಕೇಳಿ ನಡೆಯಲಿಬಹುದು
ಊಳಿಗವ ಮಾಡಿ ಮನ ದಣಿಯಬಹುದು
ಕಾಳಗವ ಪೊಕ್ಕು ಕಡಿದಾಡಿ ಜಯಿಸಲಿಬಹುದು
ಪೇಳಲವಲ್ಲ ಋಣದವಗೊಂದು ಸೊಲ್ಲ || ೩ ||

ಹರಿವ ಹಾವನು ತೆಗೆದು ಶಿರಕೆ ಸುತ್ತಲುಬಹುದು
ಉರಿವ ಉರಿಯೊಳು ಪೊಕ್ಕು ಕುಣಿಯಬಹುದು
ಮುರಿವ ಮಾಳಿಗೆಗೆ ಕೈಯೊಡ್ಡಿ ನಿಲ್ಲಿಸಬಹುದು
ಧರೆಯೊಳಗೆ ಋಣದವನ ಜಯಿಸಲಳವಲ್ಲ || ೪ ||

ಹೆತ್ತ ಸೂತಕ ಹತ್ತುದಿನ ಪರಿಯಂತ
ಮೃತ್ಯು ಸೂತಕವು ಹನ್ನೊಂದು ದಿವಸ
ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ
ಎತ್ತ ಪೋದರು ಬಿಡದೆ ಬೆನ್ನಟ್ಟಬಹುದು || ೫ ||

ಅವನ ಒಡೆವೆಗಳಿಂದ ದಾನ ಧರ್ಮವ ಮಾಡೆ
ಅವನಿಗಲ್ಲದೆ ಪುಣ್ಯ ಇವನಿಗುಂಟೆ?
ಅವನ ದ್ರವ್ಯಗಳಿಂದ ತೀರ್ಥಯಾತ್ರೆಯ ಮಾಡೆ
ಇವನ ಜೀವನವು ಬಾಡಿಗೆ ಎತ್ತಿನಂತೆ || ೬ ||

ಬಂಧು ಜನಗಳ ಮುಂದೆ ಬಹುಮಾನವು ಹೋಗಿ
ಅಂದವಳಿದೆನು ನಾನು ನೊಂದು ಋಣದಿ
ಇಂದಿರೆಯ ಅರಸ ಶ್ರೀಪುರಂದರ ವಿಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ || ೭ ||
*********