Showing posts with label ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ gurujagannatha vittala. Show all posts
Showing posts with label ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ gurujagannatha vittala. Show all posts

Wednesday 1 September 2021

ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ankita gurujagannatha vittala

 ..

ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ

ಇನಿತು ಶ್ರಮ ಕಳೆಯದಿರೆ

ಘನತಿಲ್ಲ ನಿಮದಲ್ಲ ಪ


ಹಿಂದೆ ನಿನ್ನ ಅಜ್ಞಾನಾ ಒಂದು ಮೀರಿದಕೆ ನೀ

ಇಂದು ಭವಭವಣೆ ಬಹುಪರಿಯಿಂದಲೀ

ತಂದು ನೋಯಿಸಿ ಮನಸುನಿಂದದಲೆ ಪರರಿಗೆ

ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1


ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು

ನೊಂದು ಈ ತೆರದಿ ಮಾಡುವುದು ರೀತೇ

ಕಂದನಪರಾಧಗಳ ಒಂದು ನೋಡದ ಜನನಿ

ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2


ಜಾತಮಗನನು ನಿಜತಾತ ಪರರಿಗೆ ತಾನು

ಆತುರಾದಿಂದಲಿ ಮಾರಿದಂತೆ

ದೂತರನು ಜಗದೇಕÀನಾಥ ನೀ ಪರಿಪರಿ

ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3


ನಂಬಿದವರನ್ನು ನೀ ಅಂಬಿನಲಿ ಹೊಡೆವರೆ

ಕಂಬು ಅರಿ ಪದುಮ ಗದಧರಪಾಣಿಯೆ

ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ

ಅಂಬುಧಿಮುಣುಗಿಸುವದು ಥರವೇನೋ 4


ಯಾತಕೀಸೊ ಮಾತು ಸೋತೆ ನಾ ನಿನಗೀಗ

ವಾತದೇವನ ತಾತ ಸೀತಾನಾಥಾ

ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ

ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5

***