Wednesday 1 September 2021

ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ ಇನಿತು ಶ್ರಮ ಕಳೆಯದಿರೆ ಘನತಿಲ್ಲ ನಿಮದಲ್ಲ ankita gurujagannatha vittala

 ..

ನಿನಗೆ ಅಚ್ಚರವಲ್ಲ ಅನುಮಾನಸಲ್ಲಾ

ಇನಿತು ಶ್ರಮ ಕಳೆಯದಿರೆ

ಘನತಿಲ್ಲ ನಿಮದಲ್ಲ ಪ


ಹಿಂದೆ ನಿನ್ನ ಅಜ್ಞಾನಾ ಒಂದು ಮೀರಿದಕೆ ನೀ

ಇಂದು ಭವಭವಣೆ ಬಹುಪರಿಯಿಂದಲೀ

ತಂದು ನೋಯಿಸಿ ಮನಸುನಿಂದದಲೆ ಪರರಿಗೆ

ಇಂದು ಮೊರೆಯನು ಹೋಗಿಸುವುದು ಥರವೇ ಹರಿಯೇ 1


ಒಂದು ತಿಳಿಯದಲೆ ನಾನು ಅಂದ ಮಾತಿಗೆ ಮನಸು

ನೊಂದು ಈ ತೆರದಿ ಮಾಡುವುದು ರೀತೇ

ಕಂದನಪರಾಧಗಳ ಒಂದು ನೋಡದ ಜನನಿ

ಯಂದದಲಿ ನೀ ಪಾಲಿಸುವುದು ಸ್ವಾಮೀ ಪ್ರೇಮೀ 2


ಜಾತಮಗನನು ನಿಜತಾತ ಪರರಿಗೆ ತಾನು

ಆತುರಾದಿಂದಲಿ ಮಾರಿದಂತೆ

ದೂತರನು ಜಗದೇಕÀನಾಥ ನೀ ಪರಿಪರಿ

ಫಾತಿಸಲು ಇನ್ನಾರು ಪೊರೆªರೈಯ್ಯಾ ಜೀಯಾ 3


ನಂಬಿದವರನ್ನು ನೀ ಅಂಬಿನಲಿ ಹೊಡೆವರೆ

ಕಂಬು ಅರಿ ಪದುಮ ಗದಧರಪಾಣಿಯೆ

ತುಂಬಿದ್ಹರಿಗೋಲಲ್ಲಿ ಇಂಬುಗೊಂಡಿರುವಾಗ

ಅಂಬುಧಿಮುಣುಗಿಸುವದು ಥರವೇನೋ 4


ಯಾತಕೀಸೊ ಮಾತು ಸೋತೆ ನಾ ನಿನಗೀಗ

ವಾತದೇವನ ತಾತ ಸೀತಾನಾಥಾ

ನೀತ ಶ್ರೀಗುರುಜಗನ್ನಾಥ ವಿಠ್ಠಲರೇಯ

ಮಾತು ಲಾಲಿಸಿ ಪಾಲಿಸುವದು ಇನ್ನಾ ಚೆನ್ನಾ 5

***


No comments:

Post a Comment