Showing posts with label ಇರಬೇಕು ಹರಿದಾಸರ ಸಂಗ purandara vittala IRABEKU HARIDASARA SANGA. Show all posts
Showing posts with label ಇರಬೇಕು ಹರಿದಾಸರ ಸಂಗ purandara vittala IRABEKU HARIDASARA SANGA. Show all posts

Thursday 2 December 2021

ಇರಬೇಕು ಹರಿದಾಸರ ಸಂಗ purandara vittala IRABEKU HARIDASARA SANGA




ಇರಬೇಕು ಹರಿದಾಸರ ಸಂಗ
ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ||

ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿಸುತರಿರಬೇಕು , ಅತಿಮೋಹ ಬಿಡಬೇಕು
ಮತಿಯೊಂದು ಬಿಡದೆ ಹರಿ ಪೂಜಿಪರ ಸಂಗ ||

ನಡೆಯಾತ್ರೆ ಎನಬೇಕು , ನುಡಿನೇಮವಿರಬೇಕು ,
ಬಿಡದೆ ಹರಿಪೂಜೆಯ ಮಾಡಬೇಕು
ಅಡಿಗಡಿಗೆ ನೆನೆಬೇಕು , ಹರಿಗಡ್ಡ ಬೀಳಬೇಕು
ಬಿಡದೆ ಹರಿಭಜನೆ ಮಾಡುವರ ಸಂಗ ||

ಸುರಹರವಿರಿಂಚಿಗಳ ಪರಿಯ ತಿಳಿಯಲುಬೇಕು
ತಾರತಮ್ಯ ಪಂಚಭೇದ ತತ್ವನಿರತ
ಅರಿಯದಿದ್ದರೆ ಗುರುಹಿರಿಯರನೆ ಕೇಳಬೇಕು
ಪರಮಾನಂದದಿ ಲೋಲಾಡುವರ ಸಂಗ ||

ಷಟ್ಕರ್ಮ ಮಾಡಬೇಕು , ವೈಷ್ಣವನೆನಿಸಬೇಕು
ವಿಷ್ಣುದಾಸರ ದಾಸನಾಗಬೇಕು
ಉತ್ಕೃಷ್ಟ ವೈರಾಗ್ಯ ಬೇಕು , ದುಷ್ಟಸಂಗ ಬಿಡಬೇಕು
ಎಷ್ಟು ಕಷ್ಟ ಬಂದರು ವಿಷ್ಣುಭಜಿಪರ ಸಂಗ ||

ಏಕಾಂತ ಕೊಡಬೇಕು , ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕುಲಾತಿ ಬಿಡಬೇಕು
ಶ್ರೀಕಾಂತ ಪುರಂದರವಿಠಲದಾಸರ ಸಂಗ ||
****

ರಾಗ ಕಾಂಭೋಜ ಅಟತಾಳ (raga tala may differ in audio)

pallavi

irabEku haridAsara sanga parama jnAnigaLa sampAdisa bEku

caraNam 1

ati jnAniyAga bEku harikathe kELa bEku yatigaLa pAdakke eraga bEku
sati sutarira bEku ati mOha biDa bEku matiyendu biDade hari pUjipara sanga

caraNam 2

naDe yAtreyena bEku nuDi nEmavira bEku biDade hari pUjeya mADa bEku
aDigaDige nene bEku harigaDDa bILa bEku biDade hari bhajaneya mADuvara sanga

caraNam 3

sura hara virincigaLa pariya tiLiyalu bEku tAratamya panca bhEda tatva nirata
ariyadiddare guru hariyarane kELa bEku paramAnandadi lOlADuvara sanga

caraNam 4

SaDkarma mADa bEku vaiSNavanenisa bEku viSNu dAsara dAsanAga bEku
utkrSTa vairAgya bEku duSTa sanga biDa bEku eSTu kaSTa bandaru viSNu bhajipara sanga

caraNam 5

EkAnta koDa bEku lOkavArte biDa bEku lOkaika nAthana bhajisa bEku
sAku samsAravendu kakulAti biDa bEku shrIkAnta purandara viTTala dAsara sanga
***


ಇರಬೇಕು ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.

ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1

ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2

ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3

ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4

ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
*******