Showing posts with label ನಂಬಲು ಕೆಟ್ಟವರು ಆರು ಜಗದೊಳು hanumesha vittala. Show all posts
Showing posts with label ನಂಬಲು ಕೆಟ್ಟವರು ಆರು ಜಗದೊಳು hanumesha vittala. Show all posts

Tuesday 1 June 2021

ನಂಬಲು ಕೆಟ್ಟವರು ಆರು ಜಗದೊಳು ankita hanumesha vittala

ನಂಬಲು ಕೆಟ್ಟವರು ಆರು ಜಗದೊಳು ಪ


ಹರಿ ನೀನೆ ಗತಿ ಎಂದು ಅರಿತ ಪ್ರಲ್ಹಾದನ

ದುರಿತವ ಭರದಲಿ ತರಿದ ಶ್ರೀಹರಿಯನು 1


ಕುರು ಸಭೆಯೊಳು ನರಹರಿಯನು ಸ್ಮರಿಸಿದ

ತರುಣಿಯೊಳು ಕರುಣಿಸಿ ಪೊರೆದ ಶ್ರೀಧರನನ್ನು 2


ಅನುದಿನದಲಿ ನಮ್ಮ ಹನುಮೇಶ ವಿಠಲನ

ನೆನೆದ್ವಾಲ್ಮೀಕನ ವಿಮೋಚನೆ ಮಾಡ್ದ ಶ್ರೀರಾಮನ 3

*****