Showing posts with label ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ankita kamalanabha vittala RAGHAVENDRA RAAYARADIGE BAAGI NAMISIRO. Show all posts
Showing posts with label ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ankita kamalanabha vittala RAGHAVENDRA RAAYARADIGE BAAGI NAMISIRO. Show all posts

Thursday 2 December 2021

ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ankita kamalanabha vittala RAGHAVENDRA RAAYARADIGE BAAGI NAMISIRO



kruti by Nidaguruki Jeevubai


ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ

ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ


ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ

ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ

ಪಂಕಜನಾಭನ ಕಿಂಕರರ ಭಯ

ಚಿಂತೆಯ ನೀಗುವರ

ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1


ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ

ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ

ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ-

ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2


ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ

ದೇಶ ದೇಶದ ಭಕುತರ ಉಲ್ಲಾಸ ಕೊಡುವರ

ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ

ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3


ಕಂಗೊಳಿಪ ಕೋರೆಯಿಂದ

ಬಂದ ಭದ್ರೆಯ ತೀರದಿ

ಚಂದದಿಂದ ಮೆರೆವ ರಾಘ-

ವೇಂದ್ರ ರಾಯರ

ಕೊಂಡಾಡಿ ಪಾಡಿರೊ ಮನಕೆ

ಸಂಭ್ರಮ ನೀಡುವರು

ಪೊಂದಿದ ಪಾಪಗಳೆಲ್ಲವ ನೀಗಿಸಿ

ಚಂದದಿ ಸಲಹುವರು 4


ಕರುಣದಿಂದ ಭಕ್ತರನೆಲ್ಲ

ಸಲಹುತಿರ್ಪರ

ಕಮಲನಾಭ ವಿಠ್ಠಲನಂಘ್ರಿ

ಭಜನೆ ಮಾಳ್ಪರ

ಕನಕಮಯದ ಮಂಟಪದಲಿ

ಮರೆಯುತಿರ್ಪರ

ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5

***