Thursday 2 December 2021

ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ankita kamalanabha vittala RAGHAVENDRA RAAYARADIGE BAAGI NAMISIRO



kruti by Nidaguruki Jeevubai


ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ

ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ


ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ

ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ

ಪಂಕಜನಾಭನ ಕಿಂಕರರ ಭಯ

ಚಿಂತೆಯ ನೀಗುವರ

ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1


ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ

ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ

ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ-

ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2


ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ

ದೇಶ ದೇಶದ ಭಕುತರ ಉಲ್ಲಾಸ ಕೊಡುವರ

ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ

ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3


ಕಂಗೊಳಿಪ ಕೋರೆಯಿಂದ

ಬಂದ ಭದ್ರೆಯ ತೀರದಿ

ಚಂದದಿಂದ ಮೆರೆವ ರಾಘ-

ವೇಂದ್ರ ರಾಯರ

ಕೊಂಡಾಡಿ ಪಾಡಿರೊ ಮನಕೆ

ಸಂಭ್ರಮ ನೀಡುವರು

ಪೊಂದಿದ ಪಾಪಗಳೆಲ್ಲವ ನೀಗಿಸಿ

ಚಂದದಿ ಸಲಹುವರು 4


ಕರುಣದಿಂದ ಭಕ್ತರನೆಲ್ಲ

ಸಲಹುತಿರ್ಪರ

ಕಮಲನಾಭ ವಿಠ್ಠಲನಂಘ್ರಿ

ಭಜನೆ ಮಾಳ್ಪರ

ಕನಕಮಯದ ಮಂಟಪದಲಿ

ಮರೆಯುತಿರ್ಪರ

ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5

***


No comments:

Post a Comment