Showing posts with label ಕಾರಣವು ತಿಳಿಯದೊ ಕರುಣ ನಿಧಿಯೇ tandevaradagopala vittala. Show all posts
Showing posts with label ಕಾರಣವು ತಿಳಿಯದೊ ಕರುಣ ನಿಧಿಯೇ tandevaradagopala vittala. Show all posts

Thursday 5 August 2021

ಕಾರಣವು ತಿಳಿಯದೊ ಕರುಣ ನಿಧಿಯೇ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)


ಕಾರಣವು ತಿಳಿಯದೊ ಕರುಣ ನಿಧಿಯೇ ಪ


ಬಹು ಪರಿಯಿಂದ ಕರಮುಗಿದು ಪ್ರಾರ್ಥಿಸಿದರೂ ಈ ಪರಿ ಮೌನವಾಗಿಪ್ಪ ಅ.ಪ.


ಅನ್ಯರಿಗೆ ತಲೆವಾಗಿ ಬಾಯ್ತೆರೆದು ಬೇಡುವಂಥಾ ಸಮಯ ಬಂದೊದಗಿರಲಾಗಿ ನೋಡುವುದುಚಿತವೇ ಅನಿಮಿತ್ತ ಬಂಧೊಈ ವಿಧದ ದುಷ್ಕರ್ಮ ತಂದೊದಗಿಸುವುದಕೆ ಅನ್ಯ ಜೀವರೇ ಕಾಯಾ ಹೇ ಜೀಯಾ 1

ರೋಗ ಸಾಗರದೊಳಗೆ ಮುಳುಗಿ ತಾಪ ಬಡುವುದು ನೋಡಿ ಸಹಿಸಲಾರದೇ ನಿನ್ನ ಸುಖ ಸಾರ ಚರಣಕ್ಕೆ ಮೊರೆ ಪೊಕ್ಕುದೊಕಂಡು ನಿನ್ನ ಉದ್ದಂಡ ತೊಂಡನ ಡಿಂಗನೆಂತೆಂದು ಕಣ್ತೆರೆದುನೋಡದಿರೆ ಹೆಂಡತಿಗೆ ಗತಿ ಗಂಡನಲ್ಲದೇ ಪರಮಿಂಡನೇ ಪಂಚ

ಪಾಂಡವ ಪ್ರೀಯಾ ಹೇ ಜೀಯಾ 2

ಅಂಗನಿಯಳಿಗೆ ಬಂದು ಭಂಗ ಬಿಡಿಸುವ ರೋಗಂಗಳಿಗೆ ಮಗ್ಗಂಗಳುಂ ಕೊಟ್ಟು ಅಂಗದೊಳು ಪೊಳಿಯೊರಂಗರಾಜನ ಪಾದ ಅದುಮದ ಭೃಂಗನೆನಿಸುವೊ ಧವಳ ಗಂಗೆಯ ದಾಸಾ ತಂದೆವರದಗೋಪಾಲವಿಠಲನ ದಾಸಾ3

***