Showing posts with label ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ neleyadikeshava NAMBU NAARAYANANA NAMBOO NARAHARIYA NAMBIDA BHAKTARA. Show all posts
Showing posts with label ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ neleyadikeshava NAMBU NAARAYANANA NAMBOO NARAHARIYA NAMBIDA BHAKTARA. Show all posts

Thursday, 16 December 2021

ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ankita neleyadikeshava NAMBU NAARAYANANA NAMBOO NARAHARIYA NAMBIDA BHAKTARA



ನಂಬು ನಾರಾಯಣನ ನಂಬು ನರಹರಿಯ 

ನಂಬಿದಾ ಭಕ್ತರ ಕುಟುಂಬ ಸಾರಥಿಯ 

॥ಪ॥


ಬಲಿ ನಂಬಿ ಪಾತಾಳಲೋಕಕರಸಾದ

ಅದೆಕುಲದ ಪ್ರಹ್ಲಾದನು ನಿಜವ ಕಂಡ 

ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ

ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1||


ಅಂಬರೀಷನು ನಂಬಿ ವೈಕುಂಠವೇರಿದನು|

ಹಂಬಲಿಸಿ ಶಶಿಧರನು ಉರಿಯ ಗೆದ್ದ||

ಕುಂಭಿನೀದೇವಿ ತಾ ಬಂಧನವ ಕಳೆದಳು||

ಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು|| 2||


ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನು|

ಮತಿಭ್ರಷ್ಟ ಅಜಮಿಳನ ಉದ್ಧರಿಸಿದನು|| 

ಕ್ಷಿತಿಯೊಳಗೆ ಕಾಗಿನೆಲೆ ಆದಿಕೇಶವರಾಯ|

ಪತಿತ ಪಾವನ ಪರಮಪುರುಷೋತ್ತಮನನು||3|| 

***

ರಾಗ : ಮಲಯಮಾರುತ audio here may differ

ಆದಿತಾಳ

ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ಕುಟುಂಬ ಸಾರಥಿಯ ಪ


ಬಲಿ ನಂಬಿ ಪಾತಾಳಲೋಕಕರಸಾದನದೆಕುಲದ ಪ್ರಹ್ಲಾದನು ನಿಜವ ಕಂಡಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ1


ಅಂಬರೀಷನು ನಂಬಿ ವೈಕುಂಠವೇರಿದನುಹಂಬಲಿಸಿ ಶಶಿಧರನು ಉರಿಯ ಗೆದ್ದಕುಂಭಿನೀದೇವಿ ತಾ ಬಂಧನವ ಕಳೆದಳುಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು 2


ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನುಮತಿಭ್ರಷ್ಟ ಅಜಮಿಳನ ಉದ್ಧರಿಸಿದನುಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯಪತಿತ ಪಾವನ ಪರಮಪುರುಷೋತ್ತಮನನು 3

***