Showing posts with label ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ vyasa vittala SATYASANKALPA SWAATANTRA SARVESHA. Show all posts
Showing posts with label ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ vyasa vittala SATYASANKALPA SWAATANTRA SARVESHA. Show all posts

Friday 27 December 2019

ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ ankita vyasa vittala SATYASANKALPA SWAATANTRA SARVESHA

1st Audio by Mrs. Nandini Sripad



ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ   ( ವ್ಯಾಸವಿಠಲ ಅಂಕಿತ) 

 ರಾಗ ಮೋಹನ          ಖಂಡಛಾಪುತಾಳ 

ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ 
ಸರ್ವೋತ್ತುಮನೆ ಸಾರ್ವಭೌಮಾ ॥ ಪ ॥

ಭೃತ್ಯರಿಗೆ ಬಂದ ಪರಿಪರಿ ಭಯಂಗಳ ಕಳೆದು ।
ನಿತ್ಯದಲಿ ಕಾಯೋ ಸ್ವಾಮೀ । ಪ್ರೇಮೀ ॥ ಅ ಪ ॥

ಆವ ಜನ್ಮದ ಫಲವೊ ಆವ ಕ್ರಿಯಗಳಿಂದ ।
ಆವ ಸಾಧನದ ಬಗೆಯು ।
ಆವರಿಂದಾವದನು ಘಟನೆಯನು ಮಾಳ್ಪೆಯು ।
ಆವದು ನಿನ್ನಾಟವು ।
ಆವ ಪರಿಯಿಂದಲಿ ಜೀವರನು ಸಲಹುವಿಯೊ ।
ಆವದು ನಿನ್ನಾಧೀನವೋ ॥
ದೇವದೇವೇಶ ನಿನ್ನ ಭಾವ ಬಲ್ಲವರಾರು ।
ಭಾವಜಪಿತ ಕೃಪಾಳೋ । ಕೇಳೋ ॥ 1 ॥

ದ್ವಿಪದ ತೈಜಸ ಪ್ರಾಜ್ಞ ವಿಶ್ವರೂಪಂಗಳಿಂದ ।
ಸ್ವಪನ ಕಾಲದಲಿ ನೀನು ।
ಸುಪರ್ವಾಣ ದೈತ್ಯರನು ಸೃಜಿಸಿ ಮೌನಿಯನೆ ಮಾಡಿ ।
ದಪರಿಮಿತ ಕಾರ್ಯಗಳನು ।
ಸುಫಲ ದುಷ್ಕರ್ಮಯೈದಿಸಿ ಜೀವರಿಗೆ ।
ಕ್ಲಿಪುತವಾದುದೆಲ್ಲಾ ಕೃಪೆಯಿಂದ ॥
ತೋರಿ ಬಂದಾಪತ್ತುಗಳ ಕಳೆದು ।
ಅಪರಿಮಿತ ದಯಸಾಗರಾ । ಶೂರಾ ॥ 2 ॥

ಎನ್ನಂಥ ಪಾಪಿಷ್ಠ ಇನ್ನಿಲ್ಲ ಧರೆಯೊಳಗೆ ।
ನಿನ್ನಂಥ ಕರುಣಿ ಇಲ್ಲಾ ।
ಚೆನ್ನಗುರು ವಿಜಯರಾಯರ ಪೊಂದಿದವನೆಂದು ।
ಮನ್ನಿಸಿ ಸಲಹಬೇಕು ।
ಘನ್ನ ಸಂಸಾರದೊಳು ಬವಣೆ ಬಂದಟ್ಟಿದರೆ ।
ನಿನ್ನ ಸ್ಮೃತಿ ಒಂದಿರಲಿ ॥
ಸನ್ನುತಾಂಗಿರಮಣ ವ್ಯಾಸವಿಠಲ ಮಧ್ವ ।
ಮುನಿಗೊಲಿದ ಉಡುಪಿವಾಸಾ । ಶ್ರೀಶಾ ॥ 3 ॥
****
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ

ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ.

ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1

ತ್ರಿಪದ ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2

ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
****