Showing posts with label ಜಗದಾಖ್ಯ ವೃಕ್ಷ ಚಿಂತಿಪುದು ಬುಧರು jagannatha vittala JAGADAAKHYA VRUKSHA CHINTIPUDU BUDHARU. Show all posts
Showing posts with label ಜಗದಾಖ್ಯ ವೃಕ್ಷ ಚಿಂತಿಪುದು ಬುಧರು jagannatha vittala JAGADAAKHYA VRUKSHA CHINTIPUDU BUDHARU. Show all posts

Saturday 4 December 2021

ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ankita jagannatha vittala JAGADAAKHYA VRUKSHA CHINTIPUDU BUDHARU



ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ

ಭಗವಂತನೆಂಬ ಆಗಸದಲಿ ಪಸರಿಸಿದಅ.ಪ.

ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ
ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು
ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ
ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1

ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು
ಕುಸುಮ ತನ್ಮಾತ್ರ ರಸದಿ
ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ
ಅಹರಹರ್ ಭುಂಜಿಪವು ತನ್ನಾಮ ಜೀವಖಗ 2

ನಾನು ನನ್ನದು ಎಂಬ ನೀಡ ದ್ವಯಗಳಿದಕೆ
ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ
ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
****

ರಾಗ : ಕಾಂಬೋಧಿ ತಾಳ : ಝ೦ಪೆ

ಜಗದಾಖ್ಯ ವೃಕ್ಷ 
ಚಿಂತಿಪದು ಬುಧರು ।
ಭಗವಂತನೆಂಬ ಆಕಾಶದಲ್ಲಿ 
ಪಸರಿಸಿದೆ ।। ಪಲ್ಲವಿ ।।

ಚತುರಾಸ್ಯ ವಾಣಿ ಈರ್ವರು 
ಬೀಜ ಚಿತ್ಪ್ರಕೃತಿ ।
ಪೃಥುವಿ ಕರ್ಮವು 
ಬೇರು ತ್ರಿಗುಣವು ತ್ವಚವು ।
ಕ್ಷಿತಿಜಲಾನಳ ವಾಯು 
ಗಗನ ಶಾಖಗಳೇಕ ।
ಶತಿಕಿರಣ ಉಪತೊಂಬೆ 
ಎನಿಸಿಕೊಂಬವು ಇದಕೆ ।। ಚರಣ ।।

ಅಹಂಕಾರ ಜಲದಿಂದ 
ಅಭಿವೃದ್ಧಿ ಐದುವದು ।
ಅಹಿಕ ಸುಖ ಕುಸುಮ 
ತನ್ಮಾತ್ರ ರಸದೀ ।
ಸಹಿತವಾಸ ಪ್ರವೃತ್ತಿ 
ನಿವೃತ್ತಿ ಕರ್ಮ ಫಲ ।
ಅಹರಹ ಭುಂಜಿಪದು 
ತನ್ನಾಮ ಜೀವ ಖಗ ।। ಚರಣ ।।

ನಾನು ನನ್ನದು ಎಂಬ 
ನೀಡದ್ವಯಗಳಿದಕೆ ।
ಮಾನಾಪಮಾನಾದಿಗಳೇ ಪತ್ರವು ।
ಹೀನ ವಿದ್ಯಾದಿ 
ಪಂಚಕವೇ ಸರ್ಪಗಳಲ್ಲಿ ।
ಶ್ರೀನಿಧಿ ಜಗನ್ನಾಥವಿಠ್ಠಲ 
ಸಂರಕ್ಷನು ।। ಚರಣ ।।
****