Saturday 4 December 2021

ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ankita jagannatha vittala JAGADAAKHYA VRUKSHA CHINTIPUDU BUDHARU



ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ

ಭಗವಂತನೆಂಬ ಆಗಸದಲಿ ಪಸರಿಸಿದಅ.ಪ.

ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ
ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು
ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ
ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1

ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು
ಕುಸುಮ ತನ್ಮಾತ್ರ ರಸದಿ
ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ
ಅಹರಹರ್ ಭುಂಜಿಪವು ತನ್ನಾಮ ಜೀವಖಗ 2

ನಾನು ನನ್ನದು ಎಂಬ ನೀಡ ದ್ವಯಗಳಿದಕೆ
ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ
ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
****

ರಾಗ : ಕಾಂಬೋಧಿ ತಾಳ : ಝ೦ಪೆ

ಜಗದಾಖ್ಯ ವೃಕ್ಷ 
ಚಿಂತಿಪದು ಬುಧರು ।
ಭಗವಂತನೆಂಬ ಆಕಾಶದಲ್ಲಿ 
ಪಸರಿಸಿದೆ ।। ಪಲ್ಲವಿ ।।

ಚತುರಾಸ್ಯ ವಾಣಿ ಈರ್ವರು 
ಬೀಜ ಚಿತ್ಪ್ರಕೃತಿ ।
ಪೃಥುವಿ ಕರ್ಮವು 
ಬೇರು ತ್ರಿಗುಣವು ತ್ವಚವು ।
ಕ್ಷಿತಿಜಲಾನಳ ವಾಯು 
ಗಗನ ಶಾಖಗಳೇಕ ।
ಶತಿಕಿರಣ ಉಪತೊಂಬೆ 
ಎನಿಸಿಕೊಂಬವು ಇದಕೆ ।। ಚರಣ ।।

ಅಹಂಕಾರ ಜಲದಿಂದ 
ಅಭಿವೃದ್ಧಿ ಐದುವದು ।
ಅಹಿಕ ಸುಖ ಕುಸುಮ 
ತನ್ಮಾತ್ರ ರಸದೀ ।
ಸಹಿತವಾಸ ಪ್ರವೃತ್ತಿ 
ನಿವೃತ್ತಿ ಕರ್ಮ ಫಲ ।
ಅಹರಹ ಭುಂಜಿಪದು 
ತನ್ನಾಮ ಜೀವ ಖಗ ।। ಚರಣ ।।

ನಾನು ನನ್ನದು ಎಂಬ 
ನೀಡದ್ವಯಗಳಿದಕೆ ।
ಮಾನಾಪಮಾನಾದಿಗಳೇ ಪತ್ರವು ।
ಹೀನ ವಿದ್ಯಾದಿ 
ಪಂಚಕವೇ ಸರ್ಪಗಳಲ್ಲಿ ।
ಶ್ರೀನಿಧಿ ಜಗನ್ನಾಥವಿಠ್ಠಲ 
ಸಂರಕ್ಷನು ।। ಚರಣ ।।
****

No comments:

Post a Comment