ಜಗನ್ನಾಥದಾಸರು
.ಕೃಷ್ಣರಾಯನೇ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಲ್ಯಾ ||ಪ|| 
ಶಿಷ್ಟರೊಳಗೆ ಇಟ್ಟು ಚಿರಕಾಲದಲ್ಲೆನ್ನ 
ಕಷ್ಟ ಬಿಡಿಸದೆ ಸುಮ್ಮನಿದ್ದಿಯಾ ಸ್ವಾಮಿ ||ಅ.ಪ|| 
ಜನನ ಮರಣ ಶೂನ್ಯನೆನಿಸಿಕೊಂಡು 
ಗೋಪಿ ತನಯನಾಗಿದದ್ದು ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು 
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು ||೧|| 
ದನುಜಭಂಜನನಾದ ಘನಮಹಿಮನೆ 
ಮಾಗಧನಿಗಂಜಿ ಓಡಿದ್ದು ಹೇಳಲ್ಯಾ 
ಎಣೆಯಿಲ್ಲದ ಶೂರಾ ರಣದೊಳು ಪಾರ್ಥಗೆ 
ಅನುಗನಾಗಿದದ್ದು ಹೇಳಲ್ಯಾ ನಾನು ||೨||
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ 
ಮಿತವಾಗಿ ಕದ್ದದ್ದು ಹೇಳಲ್ಯಾ 
ಕೃತಿದೇವಿ ರಮಣನೆ ಅತಿ ಪ್ರೀತಿಯಲಿ ಗೋಪ 
ಸತಿಯರ ಕೂಡಿದ್ದು ಹೇಳಲ್ಯಾ ನಾನು ||೩||
ಶ್ರುತಿತತಿಗಳಭೇದ್ಯ ಪ್ರತಿಯಿಲ್ಲದ ದೇವ 
ಸತಿಗೊಶನಾದದ್ದು ಹೇಳಲ್ಯಾ 
ಶತಕ್ರತುವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು ||೪|| 
ಭೂತಳದೊಳು ದೇವತೆಗಳೊಡನೆ 
ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿ ರಹಿತ ಜಗನ್ನಾಥವಿಠ್ಠಲನೆ 
ಅದ್ಭುತ ಮಹಿಮನೆಂದು ಹೇಳಲ್ಯಾ ನಾನು ||೫||
***
Krishnarayane ninna krutyagalella
srushtiyolage na birallya ||pa|| 
Shishtarolage ittu chirakaladallenna 
kasta bidisade summaniddiya svami ||a.pa|| 
Janana marana shunyanenisikondu 
gopi tanayanagidaddu helalya
sanakadisevya pujyane turugala hindu 
vanadalli kaydaddu helalya nanu ||1|| 
Danujabhanjananada ghanamahimane 
magadhaniganji odiddu helalya
eneyillada shura ranadolu parthage 
anuganagiddu helalya nanu ||2||
Satata truptanagi kshitiyolu benneya 
mitavagi kaddaddu helalya 
krutidevi ramanane ati pritiyali gopa 
satiyara Kudiddu helalya nanu ||3||
Shrutitatigalabhedya pratiyillada deva 
satigoshanadaddu helalya
satakratuvidhivandya sutarapekshisi 
bhutapatiyannu bediddu helalya nanu ||4|| 
Bhutaladolu devategalodane 
intha ritili charisiddu helalya
bhiti rahita jagannathavittalane 
adbhuta mahimanendu helalya nanu ||5||
***
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಯಾ ಪ
ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ.
ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ
ತನಯನಗಿದ್ದುದ ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1
ದನುಜ ಭಂಜನನಾದ ಘÀನ ಮಹಿಮನೆ ಮಾಗ
ಧನಿಗಂಜಿ ಓಡಿದ್ದು ಹೇಳಲ್ಯಾ
ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ
ಅನುಗನಾಗಿದ್ದದ್ದು ಹೇಳಲ್ಯಾ ನಾನು 2
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಾಗಿ ಕದ್ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದು ಹೇಳಲ್ಯಾ ನಾನು 3
ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ
ಸತಿಗೊಶನಾದದ್ದು ಹೇಳಲ್ಯಾ
ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4
ಭೂತಳದೊಳು ದೇವತೆಗಳೊಡÀನೆ ಇಂಥ
ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠ್ಠಲನೆ ಅ
ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
***
ಸೃಷ್ಟಿಯೊಳಗೆ ನಾ ಬೀರಲ್ಯಾ ಪ
ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ.
ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ
ತನಯನಗಿದ್ದುದ ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1
ದನುಜ ಭಂಜನನಾದ ಘÀನ ಮಹಿಮನೆ ಮಾಗ
ಧನಿಗಂಜಿ ಓಡಿದ್ದು ಹೇಳಲ್ಯಾ
ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ
ಅನುಗನಾಗಿದ್ದದ್ದು ಹೇಳಲ್ಯಾ ನಾನು 2
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಾಗಿ ಕದ್ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದು ಹೇಳಲ್ಯಾ ನಾನು 3
ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ
ಸತಿಗೊಶನಾದದ್ದು ಹೇಳಲ್ಯಾ
ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4
ಭೂತಳದೊಳು ದೇವತೆಗಳೊಡÀನೆ ಇಂಥ
ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠ್ಠಲನೆ ಅ
ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
***
 
 
No comments:
Post a Comment