Showing posts with label ಅಪರೋಕ್ಷ ಜ್ಞಾನನಿಧಿಗಳೂ ಶ್ರೀ ರಾಘವೇಂದ್ರರು venkatanatha. Show all posts
Showing posts with label ಅಪರೋಕ್ಷ ಜ್ಞಾನನಿಧಿಗಳೂ ಶ್ರೀ ರಾಘವೇಂದ್ರರು venkatanatha. Show all posts

Wednesday 1 September 2021

ಅಪರೋಕ್ಷ ಜ್ಞಾನನಿಧಿಗಳೂ ಶ್ರೀ ರಾಘವೇಂದ್ರರು ankita venkatanatha

 ..

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೇಂಕಟನಾಥ


ಅಪರೋಕ್ಷ ಜ್ಞಾನನಿಧಿಗಳೂ ಶ್ರೀ ರಾಘವೇಂದ್ರರು ।

ಅಪವರ್ಗ ಕೊಡುವರೂ ಶ್ರೀ ಹರಿಯ ದಯದಿ ।।

ಅಭುಜಭವನ ಪುರದಿಂದ ಬಂದವರು ।

ಅಬುಜೆ ಕರಕಲಮದಲ್ಲುದ್ಭವಿಸಿದ ಶಂಖುಕರ್ಣರು ।।

ದೇವ ಸ್ವಭಾವದವರೂ ಗುರುಸಾರ್ವಭೌಮರು ।

ದೇವ ನೃಸಿಂಹ ಪ್ರಿಯ ಪ್ರಹ್ಲಾದರೇ ಶ್ರೀರಾಯರು ।।

ಸಕಲ ಸುಜನೋದ್ಧಾರಕರಿವರು ।

ಸಕಲ ಭೋಗ ಭಾಗ್ಯವನು -

ಕೊಡುವ ಬಾಹ್ಲೀಕರಾಜರಿವರು ।।

ಭವ್ಯ ಸ್ವರೂಪರಿವರೂ -

ಮಧ್ವ ಮತೋದ್ಧಾರಕರು ।

ಭವಿಷದ್ಬ್ರನಾವೇಶಯುತರೂ -

ಶ್ರೀ ವ್ಯಾಸರಾಜರು ।।

ತುಂಗಾ ತೀರದಿ ವರ -

ಮಂಚಾಲೆಯಲಿ ನಿಂತವರು ।

ಮಂಗಳಾಂಗ ವೇಂಕಟನಾಥ -

ಮೂಲಾರಾಮ  ಪದಾರ್ಚಕ ರಾಘವೇಂದ್ರರು ।।

****