Showing posts with label ರಾಜರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ prasannashreenivasa. Show all posts
Showing posts with label ರಾಜರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ prasannashreenivasa. Show all posts

Thursday 5 August 2021

ರಾಜರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ವಿಭವ ಸಂವತ್ಸರ ಸ್ತೋತ್ರ 


ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆ ಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪ 


ರಾಜಿಸುವ ವಿಭವ ನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿ ನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1 

ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರ ವಿಭವಸಿತ ಪ್ರತಿಸತ್ ಊಶನ ಶುಕ್ರ ಭಾರ್ಗವ ವಾಸರವು ನಮೋ ಎಂಬೆ ಶುಕ್ರನಿಗೆ ನಮ್ಮ ಹಿತಕಾಯ್ವಿ 2 

ದಿನೋದಯದಿ ವಿಭವ ಸಂವತ್ಸರ ಸಿತಪಕ್ಷ ದ್ವಿತಿಯೇಯು ಸೌರವಾಸರವು ರಾಜಶನೈಶ್ಚರಗೂ ಮಂತ್ರಿ ಬುಧ ಮೊದಲಾದವರಿಗೂ ನಮೋ ಎಂಬೆ ದಯವಾಗಲಿ3 

ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜ ರಾಜ ಜನ ಮನಸ್ತಾಪ ಜನಕಾಷ್ಟ ನೀದಯದಿ ಪರಿಹರಿಸಿ ಸಲಹೋ ಕೃಪಾನಿಧಿಯೇ ನರಹರಿಯೇ 4 

ಧವಳ ಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವು ಎಂದುಂಟು ಅದು ಪ್ರಾಮಾಣಿಕ ಎಂದು ತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5 

ಸಂವತ್ಸರ ನಿಯಾಮಕ ಹರಿ ರೂಪಗಳ ಸೋಚಿತ ಆಚರಣೆ ಸಹ ಸಂಸ್ಮರಿಸಿ ಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿ ಮಾಳ್ಪಜನರಿಗೆ ಸುಖಕಾಲ 6 

ಕಮಲ ಸಂಭವ ಪಿತ ಕಮಲಾಲಯ ಪತಿ ಅಮಲ ಪೂರ್ಣಾನಂದಾದಿಗುಣ ನಿಧಿಯು ಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನು ತನ್ನ ಭಕ್ತರಿಗೆ ಈವ ಸುಕ್ಷೇಮವನು ಸರ್ವದಾ 7

***