Showing posts with label ಪ್ರಾರ್ಥಿಸುವೆ ರಘುನಾಥತೀರ್ಥರ prasanna. Show all posts
Showing posts with label ಪ್ರಾರ್ಥಿಸುವೆ ರಘುನಾಥತೀರ್ಥರ prasanna. Show all posts

Friday 27 December 2019

ಪ್ರಾರ್ಥಿಸುವೆ ರಘುನಾಥತೀರ್ಥರ ankita prasanna

ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ

ಸಾರ್ಥಕವಾಗಲು ಪಾರ್ಥಿವ ದೇಹವು
ಜಗದಲಿ ಕೀರ್ತಿಗಳಿಸಿದವರ ಅ.ಪ

ನೇದೃಶಂ ಸ್ಥಲಿಮಲಂ ಶಮಲಘ್ನಂ
ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ
ನಾಸ್ತಿ ವಿಷ್ಣುಂ ಸದೃಶಂ ನನುದೈವಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ 1

ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಪರಾವತಾರರ 2

ರಾಗ ದ್ವೇಷಗಳ ತೊರೆಯುತ ತ
ನ್ನನು ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ 3
***
ಶ್ರೀ ರಘುನಾಥತೀರ್ಥರು (ಶೇಷಚಂದ್ರಿಕಾಚಾರ್ಯರು)

ಶ್ರೀ ಶೇಷಚಂದ್ರಿಕಾಚಾರ್ಯರ ಕುರಿತಾದ 
ಶ್ರೀ ವಿದ್ಯಾಪ್ರಸನ್ನ ತೀರ್ಥರ ರಚನೆ


ಪ್ರಾರ್ಥಿಸುವೆ ರಘುನಾಥತೀರ್ಥರ
ಪ್ರಾರ್ಥಿಸುವೆ ಪುರುಷಾರ್ಥಪ್ರದರ || ಪ||

ಸಾರ್ಥಕವಾಗಲು ಪಾರ್ಥಿವ ದೇಹವು
ಪಾರ್ಥಸಖನೆ ಸರ್ವೋತ್ತಮನೆಂದು ಸಮರ್ಥಿಸಿ
ಜಗದಲಿ ಕೀರ್ತಿಗಳಿಸಿದವರ ||ಅ ಪ||

ನೇದೃಶಂ ಸ್ಥಲಮಲಂ ಶಮಲಘ್ನಂ
ನಾಸ್ಯ ತೀರ್ಥಸಲಿಲಸ್ಯ ಸಮಂ ವಾಃ|
ನಾಸ್ತಿ ವಿಷ್ಣು ಸದೃಶಂ ನನು ದೈವಂ
ನಾಸ್ಮದುಕ್ತಿ ಸದೃಶಂ ಹಿತರೂಪಂ
ಸತ್ಯ ವಚನಗಳಿವೆಂದು ಸೂಚಿಸುತ
ಆಸ್ತಿಕ ಜನಮನ ರಂಜಕ ತ್ರಿಮಕುಟ
ಕ್ಷೇತ್ರನಿವಾಸ ಪವಿತ್ರತಮ ಚರಿತರ | 1 |

ವ್ಯಾಸರಾಜ ಗುರುವರ್ಯ ರಚಿತ ತಾ
ತ್ಪರ್ಯ ಚಂದ್ರಿಕಾ ಗ್ರಂಥವನು
ವಾಸುದೇವ ನರಹರ್ಯನುಗ್ರಹದಿ
ಉರ್ವರಿತವ ವಿರಚಿಸಿ ಮೆರೆದ
ಶೇಷಚಂದ್ರಿಕಾಚಾರ್ಯರೆಂಬೊ ಗುರು
ವ್ಯಾಸರಾಜರ ಅಪರಾವತಾರರ ||2||

ರಾಗ ದ್ವೇಷಗಳ ತೊರೆಯುತ ತನ್ನನು  ರಾಗದಿಂದ ಭಜಿಸುವ ಜನಕೆ
ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ
ಸಾಧು ಭೋಗಗಳೀವ
ಯೋಗಿಜನ ಮನೋನಯನ ಪ್ರಸನ್ನ ಶ್ರೀ
ರಾಘವೇಂದ್ರರಪರಾವತಾರರ ||3||
*****