Showing posts with label ಕರುಣಸಾಗರರ ನೋಡಿದೆಯಾ ಮಹಾ ಪುರುಷ ankita indiresha KARUNASAAGARARA NODIDEYAA MAHAA PURUSHA APPAVARA STUTIH. Show all posts
Showing posts with label ಕರುಣಸಾಗರರ ನೋಡಿದೆಯಾ ಮಹಾ ಪುರುಷ ankita indiresha KARUNASAAGARARA NODIDEYAA MAHAA PURUSHA APPAVARA STUTIH. Show all posts

Friday 27 December 2019

ಕರುಣಸಾಗರರ ನೋಡಿದೆಯಾ ಮಹಾ ಪುರುಷ ankita indiresha KARUNASAAGARARA NODIDEYAA MAHAA PURUSHA APPAVARA STUTIH

Audio by Mrs. Nandini Sripad

ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ರಾಮಾಚಾರ್ಯರು ರಚಿಸಿದ ಕೃತಿ 
 ( ಇಂದಿರೇಶ ಅಂಕಿತ ) 

 ರಾಗ ತೋಡಿ                  ಆದಿತಾಳ 

ಕರುಣಾಸಾಗರರ ನೋಡಿದೆಯಾ , ಮಹಾ ।
ಪುರುಷರಿಗೊಂದಿಸಿ ವರವ ಬೇಡಿದೆಯಾ ॥ ಪ ॥
ಹರಿಭಕ್ತರಾಗ್ರಣಿಯ ಗುಣಗಳ ।
ಅರಿಯದವರು ಇವರನಾಡಿಕೊಂಡರೆ । 
ಕೊರತೆಯಾಗುವುದೇನು ಇಭರಾಮ - ।
ಪುರ ನಿಲಯ ಕೃಷ್ಣಾರ್ಯರ ॥ ಅ ಪ ॥

ಅವಾವ ಯೋಗಿಗಳವತಾರ ಎಂದು ।
ನಾ ವರ್ಣಿಸಲು ಪರಿಮಳ ಶರೀರ ।
ಸೇವಿಪ ಸುಜನ ಮಂದಾರ ತರು ।
ಪಾವನಾತ್ಮಕ ಪುಣ್ಯ ಪುರುಷ ಉದಾರ ॥
ಈ ವಿಧದ ಮಹಿಮೆಗಳು ಮ - ।
ತ್ತಾವ ನರರಿಗೆ ದೊರಕುವುದು ಶ್ರೀ - ।
ದೇವಿರಮಣ ಸಹಾಯದಿಂದ ಧ - ।
ರಾವಲಯದಿ ದಿಗ್ವಿಜಯ ಗೈಸಿದ ॥ 1 ॥

ಹರಿಯ ಧ್ಯಾನದೊಳಿದ್ದು ನಲಿವಾ ತನ್ನ ।
ಚರಣ ಸೇವಕರಿಗೆ ಸುಲಭದಿಂದೊಲಿವಾ ।
ದುರುಳ ದುಷ್ಕೃತಗಳಳಿವಾ ತನ್ನ - ।
ವರ ಸಮಯಕೆ ಸ್ವಪ್ನದಿ ಬಂದು ನಿಲುವಾ ॥
ಮರುತ ದೇವರು ಇವರ ಹೃನ್ಮಂ - ।
ದಿರದೊಳಗೆ ನೆಲೆಸಿ ನಿಜಾಭಿಮಾನದ - ।
ಲ್ಲಿರುವ ಕಾರಣದಿಂದಿವರ ಸಂ - ।
ದರುಶನವೇ ಸ್ವರ್ಗಾದಿ ಸಾಧನ ॥ 2 ॥

ದೋಷರಾಶಿಗಳೆಲ್ಲಾ ತರಿವಾ ತನ್ನ ।
ದಾಸ ಜನರಿಗೆ ಅಭೀಷ್ಠೆಯಗರೆವಾ ।
ತಾ ಸುರಿಸುತಾ ಸೌಖ್ಯಗರಿವಾ 
 ಇಂದಿರೇಶನ ಚರಣಾರಾಧಕರಾಗಿ ಮೆರೆವಾ ॥
ದೇಶ ದೇಶದಲ್ಲಿವರ ಕೀರುತಿ ।
ಸೂಸಿ ತುಂಬುವುದನ್ನು ತಿಳಿದು ನಿ - । 
ರ್ದೋಷಿಯಲಿ ಕುಹಕವನು ಕ - । 
ಲ್ಪಿಸಲಾಗುವುದರಿಂದವರಿಗೇನು ॥ 3 ॥
********