Showing posts with label ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ mahadevapuravasa. Show all posts
Showing posts with label ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ mahadevapuravasa. Show all posts

Thursday 5 August 2021

ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ankita mahadevapuravasa

   ..

ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ಪ


ಶ್ರೇಷ್ಠರೆಲ್ಲರು ಕೂಡಿ ಯದುಗಿರಿಯಲ್ಲಿ

ನ್ಯಾಯಕೆ ಪೋಪಕಾಲದಿ

ಪುಟ್ಟಯಾಖ್ಯನ ಸ್ವಪ್ನದಲಿ ತಾಂ-

ಬಿಟ್ಟು ಬನ್ನಿರಿಯೆನುತಪೇಳ್ದಾ ಅ.ಪ


ಎಲ್ಲಾರ ನಿನ್ನೊಳಗೆ ಸೇರಿಸಿ ಮುಂದೆ-

ಉಲ್ಲಾಸಕೊಡುವೆ ನಿನಗೆ

ಕಲ್ಲಿನಂದದಿ ಮೌನಧರಿಸುತ-

ಖುಲ್ಲಮನುಜರ ಸಂಗವರ್ಜಿಸಿ

ಎಲ್ಲಿಪೋದರು ಅಲ್ಲಿ ನನ್ನಡಿಯಲ್ಲಿ

ನಿಲ್ಲಿಸು ಮನವನೆನುತಲಿ 1

ಗುರುಸೇವಾವಿರಹಿತರಿಗೆ ವೈಷ್ಣವರನ್ನ

ಗುರುತು ಕಾಣುವದೆಂದಿಗೆ

ಪರಮ ತಿರುಮಂತ್ರಾರ್ಥ ಅಷ್ಟಾ-

ಕ್ಷರಿಯ ಜಪತಪಧ್ಯಾನಮಾಡುವ

ಹಿರಿಯರಿಲ್ಲದ ಸಭೆಗೆ ಪೋಗಲು

ದೊರಯದೆಂದಿಗು ಕೀರ್ತಿ ಎನುತಲಿ 2

ಮತಧರ್ಮಜ್ಞಾನಿಗಳು ಪೇಳಿರುವಂತ

ಮತಶಾಸ್ತ್ರವೀಕ್ಷಿಸದೆ

ಸತತದೂಷಣೆಗೈದು ಸುಜನರ -

ಕ್ಷಿತಿಯ ಭೋಗವನಂಬಿ ಗರ್ವದಿ

ಗತಿಯಮರತಿರುವಂತ ಮತ್ರ್ಯರ

ಹಿತವತಪ್ಪಿಸಿ ಕರವಪಿಡಿಯುತ 3

ಸ್ಥಿರವಲ್ಲಕಾಯವೆಂದು ಸಾತ್ವಿಕಶೃತಿಯೊ-

ಳಿರುವ ಸತ್ಯ ನೋಡೆಂದು

ಪರಿಪರಿಯವೇದಾಂತತತ್ವವ

ನಿರುತಬೋಧಿಸಿ ಜನನಮರಣವ

ತರಿದು ಎನ್ನನೆ ಯಜಿಸು ಯೆನುತಲಿ-

ಹರಸಿ ಮೋಕ್ಷವನಿತ್ತ ಆರ್ಯನು 4

ಬಿಟ್ಟು ಸತಿಸುತರೆಲ್ಲರ ಎನ್ನೊಳುಮನವ

ನಿಟ್ಟುನಂಬಿದಭಕ್ತರ

ಬಿಟ್ಟುಕೊಡೆನಾನೆಂದು ಹೃದಯಾ-

ಧಿಷ್ಟಿತನು ತಾನಾಗಿ ಅಭಯವ

ಕೊಟ್ಟನೀ ಮಹದೇವಪುರವರ

ಇಷ್ಟಶ್ರೀಗುರುರಂಗನೀಕ್ಷಿಸಿ 5

****