ನಾಮಗೊಂಡ್ಲು ಕಾಶಿ ಭೀಮಾಚಾರ್ಯರ ಕೃತಿ
ರಾಗ - : ತಾಳ -
ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು
ಪರಮಾನುಗ್ರಹ ಮಾಡಿದರೆನಗೆ ಇನ್ನೇನಿನ್ನೇನು ll ಪ ll
ತುಂಗತೀರಕೆ ಪೋಗಿ ಸ್ನಾನವಗೈದೆನು ಇನ್ನೇನಿನ್ನೇನು
ಮಂಗಳಮಹಿಮರತೀರ್ಥ ಪ್ರಾಶನಗೈದೆ ಇನ್ನೇನಿನ್ನೇನು ll ೧ ll
ಉದಯಕಾಲದೊಳೆದ್ದು ಗುರುಗಳ ಸ್ಮರಿಸಿದೆ ಇನ್ನೇನಿನ್ನೇನು
ಬೃಂದಾವನದಿಶೋಭಿಪ ಗುರುಗಳ ನೋಡಿದೆ ಇನ್ನೇನಿನ್ನೇನು ll ೨ ll
ಭಂಟನಾಗಿ ಬಾಗಿಲಕಾಯ್ದೆ ಗುರುಗಳ ಇನ್ನೇನಿನ್ನೇನು
ನೆಂಟರಿನ್ನ್ಯಾರೂ ಎನಗಿಲ್ಲವೆಂದೆ ಇನ್ನೇನಿನ್ನೇನು ll ೩ ll
ಜನ್ಮಜನ್ಮಾಂತರದಪಾಪಗಳ ಕಳೆದರು ಇನ್ನೇನಿನ್ನೇನು
ಕಣ್ಣಿನಿಂದಲಿ ನೋಡಿ ಧನ್ಯನಾದೆನು ಇನ್ನೇನಿನ್ನೇನು ll ೪ ll
ಘನಕರುಣವಾರಿಧಿ ರಾಘವೇಂದ್ರರ ಕಂಡೆ ಇನ್ನೇನಿನ್ನೇನು
ಜಾನಕಿರಮಣನ ಮನದಲಿ ಸ್ಮರಿಸಿದೆ ಇನ್ನೇನಿನ್ನೇನು ll ೫ ll
***
ರಾಗ: ಸೌರಾಷ್ಟ್ರ/ಆರಭಿ ತಾಳ: ಅಟ
ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು
ಪರಮಾನುಗ್ರಹ ಮಾಡಿದರೆನೆಗೆ ಇನ್ನೇನಿನ್ನೇನು ಪ
ತುಂಗತೀರಕೆಪೋಗಿ ಸ್ನಾನವಗೈದೆನು ಇನ್ನೇನಿನ್ನೇನು
ಮಂಗಳಮಹಿಮರತೀರ್ಥ ಪ್ರಾಶನಗೈದೆ ಇನ್ನೇನಿನ್ನೇನು 1
ಉದಯಕಾಲದೊಳೆದ್ದು ಗುರುಗಳ ಸ್ಮರಿಸಿದೆ ಇನ್ನೇನಿನ್ನೇನು
ಬೃಂದಾವನದಿಶೋಭಿಪ ಗುರುಗಳ ನೋಡಿದೆ ಇನ್ನೇನಿನ್ನೇನು 2
ಭಂಟನಾಗಿ ಬಾಗಿಲಕಾಯ್ದೆ ಗುರುಗಳ ಇನ್ನೇನಿನ್ನೇನು
ನೆಂಟರಿನ್ನ್ಯಾರೂ ಎನಗಿಲ್ಲವೆಂದೆ ಇನ್ನೇನಿನ್ನೇನು 3
ಜನ್ಮಜನ್ಮಾಂತರದಪಾಪಗಳ ಕಳೆದರು ಇನ್ನೇನಿನ್ನೇನು
ಕಣ್ಣಿನಿಂದಲಿನೋಡಿ ಧನ್ಯನಾದೆನು ಇನ್ನೇನಿನ್ನೇನು 4
ಘನಕರುಣವಾರಿಧಿ ರಾಘವೇಂದ್ರರ ಕಂಡೆ ಇನ್ನೇನಿನ್ನೇನು
ಜಾನಕಿರಮಣನ ಮನದಲಿ ಸ್ಮರಿಸಿದೆ ಇನ್ನೇನಿನ್ನೇನು 5
***