Showing posts with label ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣಾ ಎನಬಾರದೆ pranesha vittala. Show all posts
Showing posts with label ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣಾ ಎನಬಾರದೆ pranesha vittala. Show all posts

Monday 18 November 2019

ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣಾ ಎನಬಾರದೆ ankita pranesha vittala

ಕೃಷ್ಣಾ ಎನಬಾರದೆ..
ನರ ಜನ್ಮ ಬಂದಾಗ ನಾಲಿಗೆ ಇದ್ದಾಗ|
ಕೃಷ್ಣ ಎನಬಾರದೆ||

ಸ್ನಾನ ಸಂಧ್ಯಾವಂದನೆ ಬಿಟ್ಟು|
ಜ್ಞಾನಿಗಳಾದವರನು ಹಳಿವೆ|
ಧ್ಯಾನಿಪೆ ಸರ್ವದಾ ಪರರ ಕೇಡನು|
ಏನೆಂಥೇಳಲಿ ಯನ್ನಯ ಅವಗುಣ||

ಮರೆತಾದರು  ಹರಿಯೊಂದೊಮ್ಮೆ| ಸ್ಮರಿಸಿದವರ ದುರ್ಗುಣಗಳನು|
ಪೊರೆದವನೆಂಬ ನಿನ್ನ ಬಿರುದು ಕೇಳಿ|
ಪದ ಸರಸಿಜಕ್ಕೆರಗಿದೆ|
ಕರುಣಿಸೋ ಮಾಧವ||

ಪುಸಿಯಲ್ಲವೋ ಇದು| ಅಜಾಮಿಳ ಪೆಸರಾಗಿಹ ಪಾಪಿಷ್ಟರೊಳು|
ವಶಮಿರಿ ಸುತನ ಕರೆಯಲಾಕ್ಷಣ|
ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲ|
ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರೋ
*******