ರಾಗ – : ತಾಳ –
ನರಸಿಂಹನಿಗೆ ವಂದಿಪೆನೋ l ನಿನ್ನ
ಕರುಣ ಕವಚ ಎನ್ನ ಹರಣಕ್ಕೆ ತೊಡಿಸಯ್ಯಾ ll ಪ ll
ಪರಮಪಾವನರೇಯ ಕರಿಗಿರಿವಾಸನೇ
ತರಳಾನ ಮೊರೆ ಕೇಳಿ ಕರುಣದಿಂದಲಿ ಕಾಯೋ ll ಅ ಪ ll
ಭಕುತರ ಮನವ ಪರಿಕಿಸುತಾ l ದೇವ
ಯುಕುತಿ ಇಂದಲಿ ತೋರಿ ಭಕುತರ ಪೊರೆಯುವ
ಅತುಳ ಪರಾಕ್ರಮಿ ಅನಿಮೀತ ಗುಣನಿಧಿ
ಪತಿತ ಪಾವನ ದೇವ ಮತಿ ಇತ್ತು ಸಲಹಯ್ಯಾ ll 1 ll
ಪರಮ ಭಕುತನ ಸೇವೆ ಪೊಂದೀ l ದೇವ
ಮತಿಹೀನರಿಗೆ ಸನ್ಮತಿಯಾನೆ ಇತ್ತೂ
ಉತ್ತಮ ಭಕುತರಿಗೆಲ್ಲ ಅತಿಶಯದಲಿ ತೋರ್ಪೆ
ಗತಿ ನೀನೆಯೆಂದು ನಂಬಿ ಬಂದಿಹೆನಯ್ಯಾ ll 2 ll
ದಯಾ ರೂಪವನು ಪೊಂದಿ ಮೆರೆದೇ l ದೇವ
ಕರಿಗಿರಿ ಕ್ಷೇತ್ರದಿ ನಿಂದೇ
ಸ್ವಾಮಿ ಯುಕುತದಿ ತೋರುತ ಭಕುತರ ಸಲಹುತ
ರಘುರಾಮವಿಟ್ಠಲನೆ ವ್ಯಕುತವಾಗೋ ದೇವಾ ll 3 ll
***