Showing posts with label ಯಾವ ಗುರುಗಳಿಗುಂಟು ಈ ವೈಭವವು shreekrishnavittala. Show all posts
Showing posts with label ಯಾವ ಗುರುಗಳಿಗುಂಟು ಈ ವೈಭವವು shreekrishnavittala. Show all posts

Saturday 1 May 2021

ಯಾವ ಗುರುಗಳಿಗುಂಟು ಈ ವೈಭವವು ankita shreekrishnavittala

 ರಾಗ : ಶಂಕರಾಭರಣ  ತಾಳ : ಆದಿ


ಯಾವ ಗುರುಗಳಿಗುಂಟು -

ಈ ವೈಭವವು ।

ಪವನನೊಡೆಯನ ಭಕ್ತ ರಾ-

ಘವೇಂದ್ರರಿಗಲ್ಲದಲೆ ।। ಪಲ್ಲವಿ ।।


ವರ ತುಂಗಾ ತೀರದಲಿ ।

ಮೆರೆವ ಮಂತ್ರಾಲಯದಿ ।

ತರಣಿಯಂದದಿ ಮೆರೆದು । ಭ ।

ಕ್ತರನು ಪೋಷಿಸುವ ।

ಶರಣ ರಕ್ಷಕನೆಂಬ ।

ಬಿರುದಿಂದ ತಾ ಮೆರೆವ ।

ವರ ಮಧ್ವ ಕುಲಚಂದ್ರ ।

ಗುರುರಾಜಗಲ್ಲದೆ ।। ಚರಣ ।।


ಸಂತರೆಲ್ಲರೂ ಬಂದು ।

ಶಾಂತಿಯಿಂದಲಿ ನಿಂದು ।

ಕಂತುಪಿತನ ಭಕ್ತ । 

ಚಿಂತೆಯನ್ನು ಹರಿಸೆಂದು ।

ಸಂತತವು ಬೇಡುತಿಹ ।

ಶಾಂತರಾಗಿಹ ಜನರ ।

ಸಂತೋಷದಲಿ ಕಾಯ್ವ -

ಗುರುರಾಜಗಲ್ಲದೆ ।। ಚರಣ ।।


ಕಾವಿ ವಸ್ತ್ರವನು ಧರಿಸಿ ।

ಕವಿದ ಭ್ರಮೆಯನು ಬಿಡಿಸಿ ।

ಭುವಿಜ ರಮಣನ ಭಜಿಪ ।

ಕವಿ ಕುಲೋತ್ತಮ ನಮ್ಮ ।

ಸೇವಕರ ಸುರಧೇನು ।

ಪಾವನಾತ್ಮನು ಆದ ।

ಕೃಷ್ಣ ವಿಠ್ಠಲನ ಭಕ್ತ -

ಗುರುರಾಜಗಲ್ಲದೆ ।। ಚರಣ ।।

****