Showing posts with label ಬಂದರಾ ರಾಘವೇಂದ್ರ ರಾಯರು ಮಂತ್ರ karpara narahari. Show all posts
Showing posts with label ಬಂದರಾ ರಾಘವೇಂದ್ರ ರಾಯರು ಮಂತ್ರ karpara narahari. Show all posts

Saturday 1 May 2021

ಬಂದರಾ ರಾಘವೇಂದ್ರ ರಾಯರು ಮಂತ್ರ ankita karpara narahari

 

" ಶ್ರೀ ರಾಘವೇಂದ್ರ ಸ್ತುತಿ "

ರಾಗ : ಸಾವೇರಿ ತಾಳ : ಆದಿ


ಬಂದರಾ ರಾಘವೇಂದ್ರ-

ರಾಯರು ಮಂತ್ರ ।

ಮಂದಿರವೆಂಬೀ ಸ್ಥಳಕೆ 

ವಿಭವದಿ ।। ಪಲ್ಲವಿ ।।


ಇಂದು ಭಜಕ ದ್ವಿಜ 

ವೃಂದಕೆ । ಪರಮಾ ।

ನಂದ ಗರೆಯಲು 

ಸ್ಯ೦ದಣವೇರಿ ।। ಅ ಪ ।।


ಸ್ಯ೦ದಣವೇರಿ ಧನಂಧಣ 

ವಾದ್ಯದಲಿ । ಪೌರ ಜನ ।

ಸಂದಣಿಸಿತು ಆನಂದದಿ 

ನೋಡುತಲಿ ।

ಪ್ರಾರ್ಥಿಪರು ಮುಗಿಯುತಲಿ 

ಕೈಯ್ಯಾ - ಕವಿಗೇಯಾ ।

ಶುಭಕಾಯಾ ಸುಧೀಂದ್ರ 

ತನಯಾ ।।

ಗುರುವರ ಮಧ್ವ 

ಮುನೀ೦ದ್ರರಾ । ಸುಮ ।

ತಾಂಬುಧಿ ಚಂದಿರ - 

ಅತಿ ಸುಂದರ ।

ವೃಂದಾವನದಲಿ 

ನಿಂದಿಹರೆಂದರಿ ।

ತೊಂದಿಪರಿಗೆ ಭವ 

ಬಂಧವ ಬಿಡಿಸಲು ।। ಚರಣ ।।


ಸಡಗರದಲಿ ಬಿಳಿಗೊಡೆ 

ಚಾಮರ ವ್ಯಜನಾದಿಗಳನು ।

ಪಿಡಿದು ಸೇವಿಸುವ 

ಎಡಬಲದಲಿ ಸುಜನಾ ।

ಸಚ್ಛಾಸ್ತ್ರ ವೇದ 

ಪುರಾಣ ಪ್ರವಚನ ।

ಪಾವನ್ನ ಗುರುಗಳ 

ಗುಣಸ್ತವನ ।।

ಮಾಡುವಾ ವರಗಳ 

ಬೇಡುವಾ । ಕುಣಿಕುಣಿ ।

ದಾಡುವಾ ಪಡುವಾ ।

ಪೊಡವಿನಿರ್ಜರರ 

ಗಡಣವ ವೀಕ್ಷಿಸಿ ।

ಬಿಡದೆ ಪೊರೆವೆನೆಂದು ಕಡು 

ವೈಭವದಲಿ ।। ಚರಣ ।।


ಥಳಿಥಳಿಸುತ ಕಂಗೊಳಿಸುವ 

ಮಣಿಮಕುಟದಿಂದ । ದಿ ।

ಗ್ವಲಯ ಬೆಳಗುತಿಹ 

ಚೆಲುವ ಮುಖದ ಮಾಟಾ ।

ಗಳದಲ್ಲಿ ಮೌಕ್ತಿಕ ಹಾರ 

ಕೇಯೂರ ನೂಪುರ । ಸ ।

ರ್ವಾಲಂಕಾರ ವಿಲಸಿತ ।। ಮಂ ।।

ಗಳ ಗಾತ್ರದಿ ಪೊಳೆಯುತ ಭಜಕರ ।

ಕಲುಷಾಭ್ರಮಕೆ ಮಾರುತರೆನಿಸುತ ।

ಇಳೆಯೊಳು ಪಂಡಿತ 

ಯಲಿಮೇಲಾರ್ಯರಿ ।

ಗೊಲಿದು ಭಕುತ ವತ್ಸಲ-

ರೆಂದೆನಿಸಿಸುತ ।। ಚರಣ ।।


ಮಂಗಳ ತುಂಗ ತರಂಗಿಣಿ 

ತೀರದಲ್ಲಿ ಭಕುತ । ಜನಂ ।

ಗಳಿಗೆ ನಿಖಿಳಾರ್ಥಂಗಳ

ಸಲಿಸುತಲೀ ।

ಪಾಲಿಸುವ ದೇವ ಸ್ವಭಾವ 

ಶರಣರ ಸಂಜೀವಾ । ಕರ ।

ದಲ್ಲಿಗೆ ಬರುವ 

ಎನ್ನುತ ತುತಿಪರ ।।

ದೃಗ್ಬಾಷ್ಯವ ಸುರಿಸುತ 

ಮೈ ಮೆರೆಯುತ ।

ಬಲು ನಿರ್ಮಲಾನಂತರಾಗಿ 

ತವಪದಂ ।

ಗಳ ಸ್ಮರಿಪರ ಸಂಘಕೆ 

ಸತತ ಸುಮಂಗಳವೀಯಲು ।। ಚರಣ ।।


ಪುರದರಸನು ತನ್ನ ಸಿರಿ 

ಪರಿವಾರದಲಿ ಚಲಿಸುತ ।

ಬರುತ ಕಾಣುತಲೇ ಗುರುವರ ।

ಚರಣದಲಿ ಕಾಣಿಕೆಯನಿತ್ತು 

ಶಿರ ಬಾಗಿ ಚೆನ್ನಾಗಿ ।

ಆರುತಿಯ ಬೆಳಗಿ ಬರುತಿರೆ 

ರಥ ಸಾಗಿ ।।

ತೋರುವ ನೋಳ್ಪರ 

ನಯನಕೆ ಪರಮೋತ್ಸವ ।

ಶರಣರ ವಾಂಛಿತಗಳ 

ಗರೆಯುವ ।

ಪೊರೆಯುವ ಧರೆಯೊಳು 

ಮೆರೆಯುವ ಸಿರಿ । ಕಾ ।

ರ್ಪರ ನರಹರಿಯ ನೊಲಿಸಿರುವ 

ಗುರು ಪ್ರಹ್ಲಾದರು ।। ಚರಣ ।।

****


ಬಂದರಾ ರಾಘವೇಂದ್ರರಾಯರು ಮಂತ್ರ

ಮಂದಿರ ವೆಂಬೀ ಸ್ಥಳಕೆ ವಿಭವದಿ ಪ


ಇಂದು ಭಜಕ ದ್ವಿಜ ವೃಂದಕೆ ಪರಮಾ

ನಂದ ಗರಿಯಲು ಶ್ಯಂದನವೇರಿ ಅ.ಪ


ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ

ಸಂದಣಿಸಿತು ಆನಂದದಿ ನೋಡುತಲಿ

ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ

ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು-

ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ

ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ

ಬಂಧವ ಬಿಡಿಸಲು 1


ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು

ಪಿಡಿದು ಸೇವಿಸುವ ಎಡಬಲದಲಿ ಸುಜನಾ

ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ

ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ

ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ

ಗಡಣವ ನೀಕ್ಷಿಸಿ ಬಿಡದೆ ಪೊರಿವೆನೆಂದು

ಕಡು ವೈಭವದಲಿ 2


ಥಳಥಳಿಸುತ ಕಂಗೊಳಿಸುವ ಮಣಿ

ಮುಕುಟ ದಿಂದ ದಿ-

ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ

ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ-

ರ್ವಾಂಲಕಾರ ವಿಲಸಿತ ಮಂಗಳತರ ಗಾತ್ರದಿ

ಪೊಳೆಯುತ ಭಜಕರ ಕ-

ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ

ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3


ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ-

ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ

ಪಾಲಿಸುವ ದೇವ ಸ್ವಭಾವ ಶರಣ ಸಂಜೀವ

ಕರದಲ್ಲಿಗೆ ಬರುವ ಎನ್ನುತ ತುತಿಪರು

ದೃಗ್ಭಾಷ್ಪವ ಸುರಿಸುತ ಮೈಮರೆಯುತ

ಬಲು ನಿರ್ಮಲ ಅಂತರಂಗದಿತವ ಪದಂಗಳ

ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4


ಪುರದರಸನು ತನ್ನ ಸಿರಿಪರಿವಾರದಲಿ

ಚರಿಸುತ ಬರುತ ಕಾಣುತಲೆ ಗುರುವರ

ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ

ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ

ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ

ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು

ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ

ಗುರು ಪ್ರಹ್ಲಾದರು 5

****