Showing posts with label ತುಂಗೆ ಮಂಗಳ ತರಂಗೆ ಕರುಣಾಂತರಂಗೆ gopalakrishna vittala. Show all posts
Showing posts with label ತುಂಗೆ ಮಂಗಳ ತರಂಗೆ ಕರುಣಾಂತರಂಗೆ gopalakrishna vittala. Show all posts

Monday 2 August 2021

ತುಂಗೆ ಮಂಗಳ ತರಂಗೆ ಕರುಣಾಂತರಂಗೆ ankita gopalakrishna vittala

ತುಂಗೆ ಮಂಗಳ ತರಂಗೆ | ಕರುಣಾಂತರಂಗೆ

ರಂಗನಾಥನ ಪದಭೃಂಗೆ ಪ.

ಅಂಗಜಪಿತನ ಅಂಗದಿ ಉದ್ಭವೆ

ಮಂಗಳಾಂಗಿ ಭವ ಭಂಗ ಹರಿಸೆ

ಅಂಗನೆ ಎನ್ನಂತರಂಗದಿ ಹರಿಪಾ-

ದಂಗಳ ತೋರಿಸೆ ಶೃಂಗೆ ಶುಭಾಂಗೆ ಅ.ಪ.

ಆದಿ ದೈತ್ಯನು ಖತಿಯಲಿ | ಮೇದಿನಿಯ ಸುತ್ತಿ

ಒಯ್ದು ಪಾತಳ ಪುರದಲಿ

ಬಾಧೆಪಡಿಸುತಿರೆ ಮಾಧವ ಕರುಣದಿ

ಆದಿವರಾಹನೆಂದೀ ಧರೆಯೊಳು ಬಂದು

ಬಾಧಿಸಿ ಖಳನನು ಮೇದಿನಿ ಪೊರೆಯಲು

ಶ್ರೀದನ ದಾಡೆಯಿಂ ನೀನುದುಭವಿಸಿದೆ 1

ಸ್ನಾನಪಾನದಿ ನರರನು | ಪಾವನಗೈವ

ಮಾನಿನಿ ನಿನ್ನ ಕಂಡೆನು

ನಾನಾ ದುಷ್ಕøತಗಳ ನೀನೋಡಿಸಿ ಮತ್ತೆ

ನಾನು ಎಂಬುವ ನುಡಿ ನಾಲಗೆಗೀಯದೆ

ನಾನಾ ವಿಧದಲಿ ಮಾನವ ಕಾಯೆ

ಶ್ರೀನಾಥನ ಪದಧ್ಯಾನವನೀಯೆ 2

ಹರನ ಪೆಸರಿನ ಪುರದಲಿ | ಹರಿದು ಬಂದು

ವರ ಶ್ರೀ ಕೂಡಲಿ ಸ್ಥಳದಲಿ

ಭರದಿ ಭದ್ರೆಯ ಕೂಡಿ ಪರಿದಲ್ಲಿಂದಲಿ

ಹರಿಹರ ಕ್ಷೇತ್ರವ ಬಳಸಿ ಮಂತ್ರಾಲಯ

ಪುರಮಾರ್ಗದಿ ಸಾಗರವನೆ ಸೇರಿ

ವರ ಗೋಪಾಲಕೃಷ್ಣವಿಠ್ಠಲನೆ ಧ್ಯಾನಿಪೆ 3

***