Showing posts with label ಹರಿಪದ ಮಾರ್ಗ ಸುಲಭದಿ ತೋರುವ seetarama vittala. Show all posts
Showing posts with label ಹರಿಪದ ಮಾರ್ಗ ಸುಲಭದಿ ತೋರುವ seetarama vittala. Show all posts

Monday 6 September 2021

ಹರಿಪದ ಮಾರ್ಗ ಸುಲಭದಿ ತೋರುವ ankita seetarama vittala

 ರಾಗ: ಕಾನಡ ತಾಳ: ಆದಿ


ಹರಿಪದ ಮಾರ್ಗ ಸುಲಭದಿ ತೋರುವ

ಗುರು ರಾಘವೇಂದ್ರರ ಕರುಣೆಯ ಬೇಡುವೆ


ಗುರುಗಳ ಸ್ಮರಣೆಯ ಮರೆಯದೆ ಮಾಡಲು

ಹರಿಯ ಪ್ರಸಾದಕೆ ಸಾಧನ ನಿಶ್ಚಯ ಅ.ಪ


ನರಹರಿ ಸಿರಿದೇವಿ ಕರುಣಾಮೃತವು

ಹರಿಯಿತು ಧರೆಯಲಿ ಪ್ರಹ್ಲಾದನಿಂದ ಆ-

ವರ ರಸಕಲಶವೊ ಗುರುವೃಂದಾವನ

ಸುರಿವುದು ಶಿರದಿ ಸ್ಮರಿಸಲು ಗುರುಗಳ 1

ಕಳೆಯುತ ಕುಹುಯೋಗ ಉಳಿಸುತ ದೊರೆಯ

ಇಳೆಯನು ಆಳಿದ ಗುರುವ್ಯಾಸರಾಜ

ಬಳಿಯಲಿ ಬರುವರ ತಾಪವ ಕಳೆಯಲು

ಹೊಳೆದಿದೆ ಚಂದ್ರಿಕೆ ವೃಂದಾವನದಿ 2

ಅಕ್ಕರೆಯಿಂದ ಸ್ಮರಿಸಲು ಗುರುಗಳ

ರಕ್ಕಸ ಬಾಧೆಯ ಭಕ್ಷಿಪ ಯೋಗವ

ತಕ್ಷಣ ಕಳೆಯುತ ಹರಿಯೆಡೆ ನಡೆಪರು

ಸಾಕ್ಷಿ ಸೀತಾರಾಮವಿಠಲನೆಂದಿಹರೋ 3

***