Showing posts with label ಆವ ಗುರುಗಳಿಗುಂಟು ಈ ವೈಭವವು krishnavittala. Show all posts
Showing posts with label ಆವ ಗುರುಗಳಿಗುಂಟು ಈ ವೈಭವವು krishnavittala. Show all posts

Wednesday 1 September 2021

ಆವ ಗುರುಗಳಿಗುಂಟು ಈ ವೈಭವವು ankita krishnavittala

 ರಾಗ: ಕಾಂಬೋಜಿ ತಾಳ: ಝಂಪೆ

ಆವ ಗುರುಗಳಿಗುಂಟು ಈ ವೈಭವವು

ಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದೆಲೆ


ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿ

ತರಣಿಯಂದದಿ ಮೆರೆದು ಭಕ್ತರನು ಪೋಷಿಸುವ

ಶರಣರಕ್ಷಕನೆಂಬ ಬಿರುದಿಂದ ತಾಮೆರೆವ

ವರ ಮಧ್ವಕುಲಚಂದ್ರ ಗುರುರಾಜಗಲ್ಲದೇ 1

ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದು

ಕಂತುಪಿತನಭಕ್ತ ಚಿಂತೆಯನ್ನು ಹರಿಸೆಂದು

ಸಂತತವು ಬೇಡುತಿಹ ಶಾಂತರಾಗಿಹ ಜನರ

ಸಂತೋಷದಲಿ ಕಾಯ್ವ ಗುರುರಾಜಗಲ್ಲದೇ 2

ಕಾವಿವಸ್ತ್ರವಧರಿಸಿ ಕವಿದ ಭ್ರಮೆಯನು ಬಿಡಿಸಿ

ಭುವಿಜರಮಣನ ಭಜಪ ಕವಿಕುಲೋತ್ತಮ ನಮ್ಮ

ಸೇವಕರ ಸುರಧೇನು ಪಾವನಾತ್ಮನು ಆದ

ಕೃಷ್ಣವಿಠಲನಭಕ್ತ ಗುರುರಾಜಗಲ್ಲದೆ 3

***