Showing posts with label ಕಂಟಕವ ಪರಿಹರಿಸೊ ಶ್ರೀಕಂಠಮೂರುತಿಯೇ uragadrivasa vittala KANTAKAVA PARIHARISO SRIKANTA MOORUTIYE. Show all posts
Showing posts with label ಕಂಟಕವ ಪರಿಹರಿಸೊ ಶ್ರೀಕಂಠಮೂರುತಿಯೇ uragadrivasa vittala KANTAKAVA PARIHARISO SRIKANTA MOORUTIYE. Show all posts

Friday 1 October 2021

ಕಂಟಕವ ಪರಿಹರಿಸೊ ಶ್ರೀಕಂಠಮೂರುತಿಯೇ ankita uragadrivasa vittala KANTAKAVA PARIHARISO SRIKANTA MOORUTIYE




ರಾಗಮಾಲಿಕೆ    ಖಂಡಛಾಪು

2nd Audio by Vidwan Sumukh Moudgalya


ಶ್ರೀ ಉರಗಾದ್ರಿವಾಸವಿಠಲದಾಸಾರ್ಯ ವಿರಚಿತ  ಶ್ರೀ ಮಹದೇವರ ಸ್ತೋತ್ರ ಪದ  


 ಹಿಂದೋಳ 


ಕಂಟಕವ ಪರಿಹರಿಸೊ ಶ್ರೀಕಂಠಮೂರುತಿಯೆ

ಬಂಟನೆಂದೆನಿಸೆನ್ನ ವೈಕುಂಠಮೂರುತಿಗೇ॥ಪ॥


ತಂಟೆಸಂಸಾರದ ಲಂಪಟದಲೆನ್ನ ಮನ

ಮರ್ಕಟದ ತೆರದಿ ಪರ್ಯಟನ ಮಾಡೆ

ಅಂಟಿಕೊಂಡಿಹ ಈ ಭವಾಟವಿಯ ದಾಂಟಿಸುವೆ

ನೆಂಟ ನೀನಹುದಯ್ಯ ಶಿತಕಂಠದೇವಾ॥೧॥


 ರಂಜನಿ


ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲ

ಧೂರ್ಜಟಯೆ ನೀನೆ ಭವವರ್ಜಿತನ ಮಾಡೋ

ದುರ್ಜಯವು ಎನ್ನ ಮನ ಆರ್ಜಿಸದೆ ಹರಿಭಕುತಿ

ಮೂರ್ಜಗದ ಪತಿ ಜನಾರ್ದನನೊಳ್ ಮನ ನಿಲ್ಲಿಸೋ॥೨॥


 ಶಹನ


ತ್ರ್ಯಂಬಕನೆ ಎನ್ನ ಮನದಂಬರದೊಳ್ ಹರಿಪಾದ

ಅಂಬುರುಹ ತೋರಯ್ಯ ಶಂಭೋ ಮಹಾದೇವಾ

ಕುಂಭಿಣಿಯೊಳು ಒಂದೇ ಇಂಬುತೋರದು ಎನಗೆ

ಶಂಬರಾಂತಕ ವೈರಿ ಭವಭಯಹಾರಿ॥೩॥


 ರೇವತಿ


ವಾಮದೇವನೆ ಕಾಯೋ ತಾಮಸಮತಿ ಹರಿಸಿ

ಶ್ರೀ ಮನೋಹರನಲ್ಲಿ ಸನ್ಮನವ ನೀಡೋ

ಸೋಮಶೇಖರ ಸುರಸ್ತೋಮದಲ್ಲಿ ನಿನ್ನಂಥ

ಪ್ರೇಮಿಗಳ ನಾ ಕಾಣೆ ಉಮೆಯರಸ ಸಲಹಯ್ಯ॥೪॥


 ಶ್ರೀರಂಜನಿ


ಶಿಕ್ಷಕನು ನೀ ಜ್ಞಾನಚಕ್ಷುವ ನೀಡು ವಿರೂ-

ಪಾಕ್ಷ ಮೂರುತಿ ನೀ ಶ್ರೀವೆಂಕಟೇಶನ ಭಕ್ತ

ಈ ಕ್ಷಿತಿಯೊಳ್ ಉರಗಾದ್ರಿವಾಸವಿಠಲನ ಪ್ರ-

ತ್ಯಕ್ಷ ನೋಳ್ಪ ಶ್ರೀ ತ್ಯಕ್ಷಮೂರುತಿಯೇ॥೫॥

****


ಕಂಟಕವ ಪರಿಹರಿಸೊ ಶ್ರೀ ಕಂಠಮೂರುತಿಯೇ ಪ


ಬಂಟನೆಂದೆನಿಸೆನ್ನ ವೈಕುಂಠಮೂರುತಿಗೇ ಅ.ಪ


ತಂಟೆಸಂಸಾರದ ಲಂಪಟದಲೆನ್ನ ಮನ

ಮರ್ಕಟದÀ ತೆರದಿ ಪರ್ಯಟನ ಮಾಡೆ

ಅಂಟಿಕೊಂಡಿಹ ಈ ಭವಾಟವಿಯ ದಾಂಟಿಸುವೆ

ನೆಂಟ ನೀನಹುದಯ್ಯ ಶಿತಿಕಂಠದೇವಾ 1


ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲ

ಧೂರ್ಜಟಯೆ ನೀನೆ ಭವವರ್ಜಿತನ ಮಾಡೋ

ದುರ್ಜಯವು ಎನ್ನ ಮನ ಆರ್ಜಿಸದೆ ಹರಿಭಕುತಿ

ಮೂರ್ಜಗದ ಪತಿ ಜನಾರ್ದನನೊಳ್ ಮನ ನಿಲ್ಲಿಸೋ2


ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದ

ಅಂಬುರುಹ ತೋರಯ್ಯ ಶಂಭೋ ಮಹಾದೇವಾ

ಕುಂಭಿಣಿಯೊಳು ಒಂದೆ ಇಂಬುತೋರದು ಎನಗೆ

ಶಂಬರಾಂತಕ ವೈರಿ ಭವಭಯ ಹಾರೀ 3


ವಾಮದೇವನೆ ಕಾಯೊ ತಾಮಸಮತಿ ಹರಿಸಿ

ಶ್ರೀ ಮನೋಹರನಲ್ಲಿ ಸನ್ಮನವ ನೀಡೋ

ಸೋಮಶೇಖರ ಸುರಸ್ತೋಮದಲಿ ನಿನ್ನಂಥ

ಪ್ರೇಮಿಗಳ ನಾ ಕಾಣೆ ಉಮೆಯರಸ ಸಲಹಯ್ಯ 4

ಶಿಕ್ಷಕನು ನೀ e್ಞÁನಚಕ್ಷುವ ನೀಡು ವಿರೂ

ಪಾಕ್ಷಮೂರುತಿ ಶ್ರೀ ವೇಂಕಟೇಶನ ಭಕ್ತ

ಈ ಕ್ಷಿತಿಯೊಳ್ ಉರಗಾದ್ರಿವಾಸವಿಠಲನ ಪ್ರ

ತ್ಯಕ್ಷದಲಿ ನೋಳ್ಪ ಶ್ರೀ ತ್ರ್ಯಕ್ಷಮೂರುತಿಯೇ 5

****