Showing posts with label ಗುರುರಾಯ ಮಹರಾಯ ಗುಣಪೂರ್ಣ ರಾಘವೇಂದ್ರ dhanvantri vittala ಸುಳಾದಿ suladi. Show all posts
Showing posts with label ಗುರುರಾಯ ಮಹರಾಯ ಗುಣಪೂರ್ಣ ರಾಘವೇಂದ್ರ dhanvantri vittala ಸುಳಾದಿ suladi. Show all posts

Monday 6 September 2021

ಗುರುರಾಯ ಮಹರಾಯ ಗುಣಪೂರ್ಣ ರಾಘವೇಂದ್ರ ankita dhanvantri vittala ಸುಳಾದಿ suladi

kruti by ಧನ್ವಂತ್ರಿವಿಠಲ 


ಸುಳಾದಿ ರಾಗ: ಭೈರವಿ

ಧ್ರುವತಾಳ

ಗುರುರಾಯ ಮಹರಾಯ ಗುಣಪೂರ್ಣ ರಾಘವೇಂದ್ರ

ಧೊರೆಯೆ ಕಾರುಣ್ಯನಿಧಿ ಸುರತರುವೆ

ಮರುತಾವತಾರ ಮಧ್ವಮುನಿಯಭಜಕಶ್ರೇಷ್ಠ

ಧರೆಯೊಳು ಪಾಮರರನ್ನ ಉದ್ಧರಿಪ ಮಹಿಮ

ವರಮಣಿ ಕಾಮಧೇನು ಶರಣು ಹೊಕ್ಕವರಿಗೆ

ಪೊರೆದು ವಿಸ್ತರಿಸಿತು ಜಗದಿ ಕೀರ್ತಿ

ಧರಣಿಪಾಲಕ ಶ್ರೀಧನ್ವಂತ್ರಿವಿಠಲಹರಿಯ

ಚರಣಧೇನಿಪ ಮಹಪರತರ ಯತಿಶ್ರೇಷ್ಠ

ಮಟ್ಟ ತಾಳ

ಲೋಕ ಜನರಿಗೆಲ್ಲ ನೀ ಕೊಡುವಿಯೊ ವರವ-

ನೇಕವಾಗಿ ಮಹಸಾಕಾರಕರುಣದಲಿ

ವಾಕುಲಾಲಿಸು ಗುರುವೆ ನಾ ಕೇಳುವೆವಂದು

ಏಕಬುದ್ಧಿಯನಿತ್ತು ಶ್ರೀಕರ ಶ್ರೀಧರನ-

ನೇಕವಾಗಿ ತುತಿಪ ನಾಕಜನರ ಸೇವೆ

ನೀ ಕರುಣಿಸಿ ನಿತ್ಯಸಾಕುವದಿನಿತೆಂಬೆ

ಲೋಕಪಾಲಕ ಶ್ರೀಧನ್ವಂತ್ರಿವಿಠಲ ನಿನಗೆ

ಬೇಕಾದ ಗುಣಪೂರ್ಣ ಗುರು ರಾಘವೇಂದ್ರಾರ್ಯ

ತ್ರಿವಿಡಿತಾಳ

ಸಾಧನವನ್ನು ಕಾಣೆ ಈ ಧರೆಯೊಳು ಪೂರ್ಣ-

ಬೋಧರಾಯರ ದಿವ್ಯಕರುಣವೇ ಹೊರತು

ನೀ ದಯವನು ಮಾಡೆ ನಿತ್ಯಾನುಗ್ರಹ ಮಾಳ್ಪ-

ರಾದಕಾರಣದಿಂದ ನಿಮ್ಮ ದಿವ್ಯ

ಪಾದ ಸೇವೆಯನ್ನಿತ್ತು ಪಾವನ್ನಮಾಡಿ

ಮೋದವೀವುದು ಜಗನ್ಮೋದಿ ಗುರುವೆ

ಮಾಧವ ಮಹಮಹಿಮ ಶ್ರೀ ಧನ್ವಂತ್ರಿವಿಠಲನ್ನ

ಸಾಧಿಸಿ ಕೊಡುವಂಥ ಸದ್ಗುಣಿ ರಾಘವೇಂದ್ರ

ಅಟ್ಟತಾಳ

ಗುರುವೆ ಸದ್ಗುಣರನ್ನ ಶರಣು ಹೊಕ್ಕೆನು ನಿನ್ನ

ಪರಿಪಾಲಿಸೊ ಮುನ್ನವರಿತನುಗ್ರಹವನ್ನ

ಮರೆಯಲಾಗದು ಎನ್ನವರದಯ ಪರಿಪೂರ್ಣ

ಮೊರೆಹೊಕ್ಕವನನ್ನು ಎರವುನೋಳ್ಪುದೆ ಚೆನ್ನ

ಹರಿಭಕ್ತಾಗ್ರಣ್ಯ ವರಮಧ್ವಮುನಿಯನ್ನ

ಸ್ಥಿರದಿ ಭಜಿಪ ಪೂರ್ಣಪರತರ ಗುಣಗಣ-

ವರಿಯ ರಾಘವೇಂದ್ರ ಶರಣ ಕರುಣಾಬ್ಧಿ

ವರಪ್ರದ ಶ್ರೀಧನ್ವಂತ್ರಿವಿಠಲನ್ನ ನಿಜದಾಸ

ಶಿರೋಮಣಿಯೆ ನಮೋ ಧೊರೆಯೆ ಶಾಶ್ವತಫಲದ

ಆದಿತಾಳ

ವರಪ್ರಹ್ಲಾದನವತಾರ ವ್ಯಾಸಮುನಿವರ್ಯ-

ದೆರಡನೆ ಅವತಾರ ವರಯೋಗಿ ಎನಿಸಿ

ಧರೆಯೊಳು ವಿಸ್ತರಿಸಿ ಮಹಿಮೆ ತೋರಿ ಉ-

ದ್ಧರಿಸಿ ಸಜ್ಜನರನ್ನು ಮೆರೆದು ಪರಮಸುಖ

ತ್ವರಿತದಿ ತೋರಿಕೊಟ್ಟು ಗುರುವರ ಗುಣವರ್ಯ

ಸುರಮುನಿ ರಾಘವೇಂದ್ರ ನರನಸಾರಥಿ ಶ್ರೀಧನ್ವಂತ್ರಿವಿಠಲನ್ನ

ಕರುಣನೀಕ್ಷಿಸಿ ತಕ್ಷಣದಿ ಉದ್ಧರಿಸುವ

ಜತೆ

ಆನಂದಮುನಿಯಿಂದವಂದ್ಯ ಶ್ರೀಧನ್ವಂತ್ರಿವಿಠಲನಿ-

ಗೆ ನಮಿಸುವ ರಾಘವೇಂದ್ರಗುರುವೆ ನಮೋ ನಮೋ

***