Showing posts with label ರಾಘವೇಂದ್ರರ ಚರಣ ಅನುದಿನವು ಭಜಿಸೊ krishnavittala. Show all posts
Showing posts with label ರಾಘವೇಂದ್ರರ ಚರಣ ಅನುದಿನವು ಭಜಿಸೊ krishnavittala. Show all posts

Monday 6 September 2021

ರಾಘವೇಂದ್ರರ ಚರಣ ಅನುದಿನವು ಭಜಿಸೊ ankita krishnavittala

ರಾಗ: ಕಾಂಬೋಜಿ ತಾಳ: ಝಂಪೆ


ರಾಘವೇಂದ್ರರ ಚರಣ ಅನುದಿನವು ಭಜಿಸೊ


ಯೋಗಿವಂದ್ಯನ ಚರಣದಲಿ ಮನವ ನಿಲಿಸೊ ಅ.ಪ


ಭಕ್ತರಘವನುಹರಿಸಿ ಸತತ ಪೊರೆಯುವ ಚರಣ

ಭಕ್ತನೋರ್ವಗೆ ಬಂದ ಅಪಮೃತ್ಯು ಹರಣ

ಭಕ್ತಿಯಿಂಪೂಜಿಸಲು ಗತಿಯತೋರುವ ಚರಣ

ಭಕ್ತಬಾಂಧವ ಗುರುವಿನೊಳು ಅತಿಶ್ರೇಷ್ಠ ಚರಣ 1

ರಾಮನಾಮವ ಬಿಡದೆ ಭಜಿಸುವಾ ಗುರುಚರಣ

ವಿಮಲಜ್ಞಾನವಿತ್ತು ಪೊರೆವ ಚರಣ

ಕಾಮಧೇನುವಿನಂತೆ ನಿರುತ ಭಕ್ತರ ಸಲಹಿ

ಕಾಮಿತಾರ್ಥವನಿತ್ತು ಕಾಯ್ವ ಗುರುಚರಣ 2

ಭುವಿಯ ಮೋಹವ ತ್ಯಜಿಸಿ ಭವ್ಯಯತಿಎಂದೆನಿಸಿ

ಭುವಿಜೆಯರಸನ ಸ್ಮರಿಪ ದಿವ್ಯಚರಣ

ಭಾವಶುದ್ಧಿಯಿಂ ಇರುತ ಕವಿಶ್ರೇಷ್ಠನೆಂದೆನಿಸಿ

ಭವದಬಂಧವನೀಗಿ ಕಾಯ್ವ ಶುಭಚರಣ 3

ಮಂತ್ರಾಲಯದೊಳು ಮುದ್ದು ಬೃಂದಾವನದಿ

ಸಂತಸದಿ ನೆಲೆಸಿರುವ ಗುರುರಾಜ ಚರಣ

ಸಂತತವು ಭಕ್ತರನು ಬಿಡದೆಪಾಲಿಪ ಚರಣ

ಚಿಂತೆಯೆಲ್ಲವನೀಗಿ ಕಾಯ್ವ ಚರಣ 4

ಕಷ್ಟವೆಲ್ಲವಹರಿಸಿ ಶಿಷ್ಠರನು ಸಲಹುತ್ತ

ಶ್ರೇಷ್ಠಮಾರ್ಗವ ತೋರಿ ಸತತಪಾಲಿಪ ಚರಣ

ಸೃಷ್ಠೀಶ ಶ್ರೀಕೃಷ್ಣವಿಠಲನನು ಭಜಿಸುತ್ತ

ಪ್ರೇಷ್ಠಜನರನು ಪೊರೆವ ಶ್ರೇಷ್ಠ ಗುರುಚರಣ 5

***