Monday 6 September 2021

ವೃಂದಾವನದ ಸೇವೆಯ ankita hayavadana ತುಲಸೀ ಮಹಿಮ VRUNDAVANADA SEVEYA TULASI MAHIMA

Audio by Vidwan Sumukh Moudgalya


ಶ್ರೀ ವಾದಿರಾಜ ಕೃತ ಶ್ರೀ ತುಲಸೀ ಮಹಿಮಾ ಪದ 


 ರಾಗ : ಭೌಳಿ   ಆದಿತಾಳ 


ವೃಂದಾವನದ ಸೇವೆಯ ॥ಪ॥


ವೃಂದಾವನದ ಸೇವೆ ಮಾಡಿದವರಿಗೆ ಭೂ-

ಬಂಧನ ಬಿಡುಗಡೆಯಾಗುವುದು ॥ಅ.ಪ॥


ಏಳುತಾಲಿರೆ ಕಂಡು ಕರವ ಮುಗಿದು ಬೇಗೀ-

ರೇಳು ಲೋಕದ ಮಾತೆಗೆ ನಮೋಯೆಂಬೊದಲ್ಲದೆ

ಏಳು ಪರದಕ್ಷಿಣೆಯನು ಮಾಡಿದವರಿಗೆ

ಏಳು ಜನುಮದ ಪಾಪ ಹಿಂಗುವುದು ॥೧॥


ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-

ನ್ನೀರನೆರೆದು ಪ್ರತಿದಿವಸದಲ್ಲಿ

ಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನ

ಸೇರಿಸುವಳು ತನ್ನ ಪದವಿಯನು ॥೨॥


ಒಡೆಯನ ಮನೆಗೆ ನೀರುತರುತಲೊಬ್ಬಳು

ಎಡಹಿ ಬಿದ್ದಳು ತನ್ನ ಕೊಡನೊಡೆಯೆ

ಸಿಡಿದು ಶ್ರೀತುಲಸಿಗೆ ತಂಪಾಗಲು ಮುನ್ನ

ಕೊಡಳೆ ಅವಳಿಗೆ ಮೋಕ್ಷಪದವಿಯನು॥೩॥


ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-

ದೇಶಿಸಿದನು ತನ್ನ ಭಾಗವತದಲ್ಲಿ

ಕಾಸುವೀಸ ಹೊನ್ನು ಹಣ ಸವೆಯದ ಮುನ್ನ ನಿ-

ರಾಶೆಯಿಂದಲಿ ಮುಕ್ತಿ ದೊರಕುವುದು ॥೪॥


ಪೊಡವಿಗಧಿಕವಾದ ಸೋದೆಪುರದ ತ್ರಿವಿಕ್ರಮ

ಎಡಭಾಗದಲಿ ಲಕ್ಷ್ಮೀದೇವಿಯ ಸಹಿತ

ಸಡಗರದಿಂದಲಿ ಹಯವದನನ ಪಾದ

ಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ ॥೫॥

***


ವೃಂದಾವನದ ಸೇವೆಯ ಪ.


ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ.


ಏಳುತಾಲಿದಿರೆ ಕಂಡು ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1


ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2


ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3


ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4


ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5

***


No comments:

Post a Comment