Thursday 1 July 2021

ಗುರುರಾಜರ ಸ್ಮರಿಸಿರೋ ದುರಿತವ ಕಳೆದು ಸದ್ಗತಿಯ ankita vijayaranga vittala pradyumna teertha stutih

 ರಚನೆ : ಶ್ರೀಯುತ ರಂಗನಾಥ ಭಾರಧ್ವಾಜ್

ಅಂಕಿತ :ಗಜಗಹ್ವರದಲಿ ನೆಲೆನಿಂತ - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವರ ಪ್ರಸಾದಾಂಕಿತ " ವಿಜಯರಂಗ ವಿಠ್ಠಲ"


ಗುರುರಾಜರ ಸ್ಮರಿಸಿರೋ ।। ಪಲ್ಲವಿ ।।


ದುರಿತವ ಕಳೆದು ಸದ್ಗತಿಯ -

ಪಡೆವವರೆಲ್ಲ ।। ಅ ಪ ।।


ಪ್ರಿಯತೀರ್ಥ ಮುನಿಗಳ -

ಸಂಜಾತ ಇವ ।

ಅನಿಲದೇವನ ನಿಜ ಭಕುತ ।

ಪಾಮರರನು ಇವ -

ಪಾವನಗೊಳಿಸುವ ।

ಶ್ರೀ ಪ್ರದ್ಯುಮ್ನತೀರ್ಥರೆಂಬೋ -

ಪ್ರಿಯವಾದ ಪೆಸರುಳ್ಳ ।। ಚರಣ ।।


ಬ್ರಹ್ಮಣ್ಯ ಬ್ರಹ್ಮಾಣಿ ಪದಗಳ ಇವ ।

ಸದಾ ಸಂಸ್ಕರಿಸುತ ।

ಗುರು ಮಧ್ವರಾಯರ -

ಮತವ ಸಾಧಿಸುತ ।

ಭಾವಿರಾಯರೆಂಬೋ -

ರಘುಪತಿ ಪ್ರಿಯರ ।। ಚರಣ ।।


ಬ್ರಹ್ಮಣ್ಯತೀರ್ಥರ ಕಂದ ಇವ ।

ಬಂಕಾಪುರದಲ್ಲಿ ಮೆರೆವ ।

ಸೇವಿಪ ಜನರ -

ದುರ್ಬೋಧ ಪರಿಹರಿಸುತ ।

ವಿಜಯರಂಗ ವಿಠ್ಠಲನ -

ಹೃದಯದಿ ನೋಳ್ಪರ ।। ಚರಣ ।।

****


No comments:

Post a Comment