..
kruti by bhupati vittalaru ( kakhandaki Ramacharyaru)
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು ll ಪ ll
ತಂದೆ ತಾಯಿಯ ಸೇವೆ ಮಾಡಿದ
ಪುಂಡಲೀಕನ ಭಕ್ತಿಗೊಲಿದು
ಚಂದ್ರಭಾಗಾ ತೀರದಲ್ಲಿ
ಬಂದು ನಿಂತ ವಿಟ್ಠಲನ ಕಂಡು ll 1 ll
ವೆಂಕಟೇಶ ಅಲ್ಲಿರುವ
ಶಂಖ ಚಕ್ರ ಪಿಡಿದ ಕರವ
ಟೊಂಕದ ಮೇಲಿಟ್ಟುಕೊಂಡು
ನಿಂತು ಇಲ್ಲಿ ವಿಟ್ಠಲನಾದ ll 2 ll
ಕಡಗೋಲಿಂದ ಗಡಿಗೆ ಒಡೆದು
ತುಡುಗು ಮಾಡಿದ ಹುಡುಗ ಬಂದು
ಉಡುಪಿಯಲ್ಲಿ ಕೃಷ್ಣನಾಗಿ
ಓಡಿ ಬಂದಿಲ್ಲಿ ವಿಟ್ಠಲನಾದ ll 3 ll
ಎಷ್ಟು ಜನ್ಮದ ಸುಕೃತವೋ ಶ್ರೀ
ಕೃಷ್ಣ ವಿಟ್ಠಲ ರೂಪದಿಂದ
ಭಕ್ತ ಜನರಿಗಾಲಿಂಗನ
ಭೆಟ್ಟಿ ಕೊಡುತ ನಿಂತುಬಿಟ್ಟ ll 4 ll
ಅನ್ನಬ್ರಹ್ಮ ಉಡುಪಿಯಲ್ಲಿ
ಚಿನ್ನಬ್ರಹ್ಮ ಬೆಟ್ಟದಲ್ಲಿ
ಸಣ್ಣ ತುಳಸಿಮಾಲೆ ಸಾಕು
ನಾದ ಬ್ರಹ್ಮ ಭೂಪತಿವಿಟ್ಠಲಗೆ ll 5 ll
***
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತವಿಠ್ಠಲನ ಕಂಡು 1
ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ ವಿಠಲನಾದ 2
ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ ವಿಠಲನಾದ 3
ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ ವಿಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4
ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿವಿಠಲಗೆ 5
ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
***
No comments:
Post a Comment