Thursday 2 December 2021

ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ ankita madhwesha krishna ENTHA VAIBHAV NODE MALAKHEDA KSHETRADI



..ಜಯತೀರ್ಥರ ಸ್ಮರಣೆ

ಶ್ರೀಮತಿ ಸುಶೀಲ ಬಾಯಿ ಅಮ್ಮ (ಮಧ್ವೇಶ ಕೃಷ್ಣ ಅಂಕಿತ ) ಅವರ ಕೃತಿ 


 ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ 

ಇಂಥಾ ಯತಿಗಳ ದರುಶನವು ಸಂತಸವ ತರುವದೆಂಥಾ ವೈಭ

ವವು ನೋಡೆ||ಪಲ್ಲ||


 ಹಾದೀಗ್ಹಂದರ ಹಾಕಿ

 ಬೀದಿ ತೋರಣಕಟ್ಟಿ

ಸಾಧು ಜನರೆಲ್ಲ ಒಡಗೂಡಿ ಮಳಖೇಡದಲ್ಲಿ

 ಮೋದದಿ ಭಜಿಸುವರೆಷ್ಟೊ

ವೇದ ಓದುವರೆಷ್ಟೊ

ಮಾಧವನ ಮನಸಾರ ನೆನೆಯುತ್ತ ಕುಣಿಯುವರೆಷ್ಟೊ||೧||

 ಗುಂಪು ಗುಂಪಿಲಿ ಜನರು

ತಂಪಾಗಿ ಬರುವರು

ಇಂಪಾಗಿ ಗಾನ ಮಾಡುತಲಿ ಮಳಖೇಡದಲ್ಲಿ

 ಸಂಪಾಗಿ ಕೇಳುವ

ಮಂತ್ರದ ಮಹಿಮೆಯ

ಶಾಂತ ಚಿತ್ತದಲಿ ಆಲಿಸುತ ಕುಳಿತವರೆಷ್ಟೊ||೨||

 ಸಾಗಿ ಬರುತಾಲಿದ್ದು

 ಬಾಗೀ ವಂದನೆ ಮಾಡಿ

 ಕಾಗಿನಿ ತಟದ ಯತಿಗಳಿಗೆ ಬಹು ಭಕುತಿಯಿಂದ

 ಯೋಗಿ ಟಿಕಾರ್ಯರ ದಾಸ

ನಾಗುವ ಭಾಗ್ಯ

ಬ್ಯಾಗ ಬರಲಿಂದು ನಮಗೆಂದು ಬೇಡುವರೆಷ್ಟೊ||೩||

ಬಂಗಾರ ಮಂಟಪದಿ

ಶೃಂಗಾರವಾದಂಥ

ರಂಗು ಮಾಣಿಕ್ಯ ಭರಣಿಟ್ಟ ಮೂಲ ರಾಮನಿಗೆ

 ಮಂಗಳ ಮಹಿಮನ

 ಕಂಗೊಳಿಸುವ  ಸ್ವಚ್ಛ

ಬಂಗಾರ ಭರಣಕಾಂತಿಯು ಹೊಳೆಯುತಲಿಹುದು||೪||

 ನಿತ್ಯ ತೃಪ್ತನಿಗೆ 

ಸತ್ಯಾತ್ಮತೀರ್ಥರು

ಅತ್ಯಂತ ವಿನಯದಲಿ ಪೂಜಿಸುತ ಮಳಖೇಡದಲ್ಲಿ

 ಸುತ್ತಿ ಬಂದಿರುವಂಥ

ಭಕ್ತ ಜನರಿಗೆ ಎಲ್ಲ

ಮಧ್ವೇಶಕೃಷ್ಣನ  ದಯದಿಂದ ಮಂತ್ರಾಕ್ಷತೆಯ ನೀಡಿ||೫||

***


No comments:

Post a Comment