Tuesday, 13 April 2021

ಚರಣಕಮಲ ಭಜಿಸೋ ಗೋಪಾಲಕೃಷ್ಣನ ankit narahari

 ರಾಗ - : ತಾಳ - 


ಚರಣಕಮಲ ಭಜಿಸೋ ಗೋಪಾಲಕೃಷ್ಣನ ll ಪ ll


ಮುರಲೀ ವಾದ್ಯದಲಿ ಗೋಪರನ

ತರುಣಿಯರ ಮನವನು

ಮರುಳುಗೊಳಿಸಿದ ಪರಮ ಸುಂದರನ ಧರೆಯೊಳಗೆ

ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ll ಅ ಪ ll


ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ

ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ

ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ

ವೇಣುಗೋಪಾಲನಾ ll 1 ll


ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ 

ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ

ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ 

ಸಿಂದೂರವರದನಾ ll 2 ll


ಕೃಷ್ಣ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ

ಸೃಷ್ಟೀಷನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ

ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಟಗರಿಯುವನಾ 

ಪರಮೇಷ್ಠಿ ಜನಕನ ll 3 ll


ಹರಿ ಮಹಿಮೆ ತಿಳಿಯದೆ ಸುರಪತಿಯು ಮಳೆ

ಗರಿಯೆ ಗೋಗಳನಾ

ರಕ್ಷಣೆಯ ಮಾಡಲು ಕಿರಿಯ ಬೆರಳಲಿ

ಗಿರಿಯ ಧರಿಸಿದನಾ ಇದ

ನರಿತು ಸುರಪನು ಸುರಭಿ ಸಹ ಬಂದೆರಗಿ

ಕೃಷ್ಣನ್ನ ಪೂಜಿಸಲು ಒಲಿದನ ll 4 ll


ಶರಣಾಗತ ಜನರ ಪೊರೆಯಲು ಬಂದಿನಿಂತಿಹನಾ ಕಾ

ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ

ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು

ತುರುಪಾಲ ಕೃಷ್ಣನ ll 5 ll

***


No comments:

Post a Comment