Sunday 1 August 2021

ಜಯತು ಜಗದೀಶ ಇಂದಿರೇಶ ಜಯತು ವೈಕುಂಠರಮಣಾ ಉಪ್ಪವಡಿಸಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಜಯತು ಜಗದೀಶ ಇಂದಿರೇಶ

ಜಯತು ವೈಕುಂಠರಮಣಾ ಉಪ್ಪವಡಿಸಾ ಪ


ಏಕಾರ್ಣವದಲಿ ವಟದೆಲೆಯಲಿ ಸಕಲಲೋಕ

ವಾಕಾರವಳಿಯೆ ಬಾಲಕತನವನಳ ವಡಿಸಿ

ಶ್ರೀಕರಾಂಬುಜದಿಂದ ಪಾದಾಂಗುಟವ ಪಿಡಿದ ತನುಜನಂದದೀ

ಏಕಮೇವಾದ್ವಿತೀಯನೆಂಬಾಗಮದ

ವಾಕ್ಕಿಂಗೆ ದೃಷ್ಟಾಂತವಾಗಿ ಪವಡಿಸಿಹ ಲ

ಕ್ಷ್ಮೀ ಕಾಂತ ಸಕಲ ಲೋಕದ ಭಕುತರನು ಸಲಹ

ಬೇಕು ನಲಿದುಪ್ಪವಡಿಸಾ 1


ಘಣಿರಾಜನಂತರಂಗತಲ್ಪದ ಮೇಲೆ ತತ್ಫಣಾ

ಮಣಿಯ ಬೆಳಗಿನಲಿ ಸುರನಿಕರವೆಡಬಲದಿ ಸಂ

ದಣಿಸಿ ಬರಲು ನಾರದ ತುಂಬುರರು ಭವದೀಯ

ಗುಣಗಣಂಗಳ ಪಾಡಲೂ

ಗುಣನಿಧಿಗಳೆನಿಪ ಶ್ರೀದೇವಿ ಭೂದೇವಿಯರು

ಕ್ಷಣವಗಲಲರಿಯದೇ ಪಾದಾಂಬುಜವ ಮನ

ದಣಿಯಲೊತ್ತಲು ಸುಖದೊಳೊರಗಿಹ ದಿವಿಜ ಶಿಖಾ

ಮಣಿಯೆ ಟಿಲಿದುಪ್ಪವಡಿಸಾ 2


ಖಗರಾಜ ನವರತ್ನಮಯದ ತೊಟ್ಟಿಲುಮಾಗೆ

ನಿಗಮನಾಲಕು ಕುಂದಣದ ಸರಪಣಿಗಳಾಗೆ

ಬಗಸಿಗಂಗಳ ಭಾವಕಿಯರಾಗಿ ಉಪನಿಷ

ತ್ತುಗಳು ನೆರೆದಾನಂದದೀ

ಮುಗುದರರಸಾ ಮುಕುಂದಾಯೆನಲು ನಲಿಯೆ

ಪಾಲ್ಗಡಲಲೊಡೆಯ ವೇಲಾಪುರದ ಚೆ

ನ್ನಿಗರಾಯ ವೈಕುಂಠರಮಣ ತವಶರಣ ಜನ

ರುಗಳ ಸಲಹುಪ್ಪವಡಿಸಾ 3

***


No comments:

Post a Comment