Wednesday 1 September 2021

ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ ankita bhupati vittala satyadhyana teertha stutih

by ಶ್ರೀ ಭೂಪತಿ ವಿಟಲ ದಾಸರು


ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ

ಸತ್ಯವಾದ ಜ್ಞಾನ ಹುಟ್ಟುವುದು | ಪ |

ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತು

ಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ  | ಅ.ಪ |

ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣ

ಸರ್ವದೋಷ ವರ್ಜಿತನೆಂದು

ವರ ಮಧ್ವಮತವೆ ವೇದ್ಯವೆಂದು

ಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ |

ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿ

ದುರ್ವಾದಿಗಳ ಸದ್ದು ಆದಗಿಸುತಾ

ಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತ

ಪ್ರಶ್ನಾರ್ಹ ರೂಪಗಳ ಗ್ರಂಥ ರಹಿಸಿದಂಥಾ | ೨ |

ದಾನದಲಿ ಕರ್ಣ ಜ್ಞಾನದಿ ಶುಕಮುನಿ

ಮೌನಿ ಕುಲಕೆ ಸನ್ಮಾನ್ಯರಾಗಿ

ಧರ್ಮ ಸಾಮ್ರಾಜ್ಯಕೆ ಸಾರ್ವಭೌಮನಾದ

ಶ್ರೀನಿಧಿ ಭೂಪತಿವಿಠಲನ ದಾಸ |

***


No comments:

Post a Comment