Saturday 1 May 2021

ನಮಿಸುವೆನು ಸುವ್ರತೀಂದ್ರ ಯತಿಗಳಿಗೆ ಸತತ ankita lakumeesha suvrateendra teertha stutih

 suvrateendra teertha rayara mutt 1933 yati stutih

ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 

ಅಂಕಿತ : ಶ್ರೀ ಲಕುಮೀಶ 

ಧಾಟಿ : ನಮೋ ನಮೋ ಶ್ರೀ ರಾಘವೇಂದ್ರ 


ನಮಿಸುವೆನು ಸುವ್ರತೀಂದ್ರ 

ಯತಿಗಳಿಗೆ ಸತತ ।। ಪಲ್ಲವಿ ।।


ಭ್ರಮಿಸಿ ತ್ರಯ ಮೋಹದಲಿ ।

ಶ್ರಮಿಸಿ ಶ್ರೀ ಹರಿ ಪದವ ।    

ನಮಿಸಿ ನಾ ತುತಿಸದಲೆ -

ಕೆಟ್ಟೆ ಕೈಪಿಡಿಯೆಂದು ।। ಅ ಪ ।।


ಹುಲಿ ಹನುಮಂತರ 

ಚಲ್ವ ಭವರಿವರಲ್ಲಿ ।

ಸಲ್ಲಿಸುತ ವೇದಾಂತ ನ್ಯಾ

ಯಶಾಸ್ತ್ರದ ಕಲಿತೂ ।

ಕಲಿತನದಿ ತಿರುಪತಿಲಿ 

ಪ್ರೌಢಾಧ್ಯಾಪಕರಾಗಿ ।

ಇಳೆಯೊಳಗೆ ಬಹು ಕೀರ್ತಿ 

ಪಡೆದಂಥ ಮಹಿಮರಿಗೆ ।। ಚರಣ ।।


ಒಲುಮೆ ಗಳಿಸಿ ಶ್ರೀ ಸುಶೀಲೇಂದ್ರ 

ಯತಿಗಳಲಿ ।

ಹುಲಿ ಕೃಷ್ಣರಿವರೀಗ 

ಒಲಿದಾಶ್ರಮ ನೀಡಿ ।

ಬಲಗೊಂಡು ಶ್ರೀ ಮೂಲರಾಮಾದಿ 

ಪೂಜೆಯಲಿ ।

ನಲಿದು ದಕ್ಷಿಣ ಯಾತ್ರೆ 

ಹರುಷದಲಿ ಗೈದರಿಗೆ ।। ಚರಣ ।।


ಶ್ರೀ ಕುಂಭಕೋಣದಲಿ 

ಮಹಾ ಸಮಾರಾಧನೆಗೆ ।

ಜೋಕೆಯಲಿ ಸಮೀರಾ 

ಸಮಯ ಸಭದೀ ।

ಆ ಕೃಷ್ಣ ಎಲತ್ತೂರು 

ಕಪಿಸ್ಥಲಂ ದೇಶಿಕಾರ್ಯ ।

ಚಕ್ರವರ್ತಿ ಅಯ್ಯಂಗಾರ್ರಿವರ

ಬರ ಮಾಡ್ದರಿಗೆ ।। ಚರಣ ।\


ಕೂಡಲಿ ಶೃಂಗೇರಿ ಮಠದ 

ಸ್ವಾಮಿಯವರು ।

ಸಡಗರದಿ ಬಂದ 

ಅಭಿನವ ಭಟ್ಟಾರ್ಯರು ।

ದೊಡ್ಡ ಬಳ್ಳಾಪುರದ 

ವಾಸುದೇವಾಚಾರ್ಯರು ।

ಬಿಡದೆ ವಿರೂಪಾಕ್ಷ 

ಕೋವಿದರ್ಕರಿಸಿದರಿಗೆ ।। ಚರಣ ।।


ವೈದ್ಯನಾಥಶಾಸ್ತ್ರಿ 

ತಿರುವಾದಿ ವಿಜಯೀ೦ದ್ರ ।

ಮುದದಿಂದ ಬಂದ  

ಕೋವಿದ ಕೃಷ್ಣಮೂರ್ತಿ ।

ಒದಗೆ ವಾಕ್ಯಾರ್ಥ 

ಪಶೂನಾ ಯಜೇತಕ್ಕೆ ।

ತುದಿ ನಿರ್ಣಯ ನೀಡಿ 

ಗೆದ್ದಂತ ಯತಿಗಳಿಗೆ ।। ಚರಣ ।।


ದೇಶಿಕಾರ್ಯರು ಇವರ 

ಭಾಸುರ ವಿದ್ವತ್ತಿಗೆ ।

ಸೋಶಿಲಾಕ್ಷಣದಲ್ಲಿ 

ಕವನವನು ನೀಡೆ ।

ತೋಷದಲಿ ಪೂಜೆಗೈದು 

ವಿಜಯೀ೦ದ್ರರಡಿಗಿಟ್ಟು ।

ರಾಶಿ ಧನ ಕನಕಾದಿಗಳ 

ಪಂಡಿತರಿಗಿತ್ತಂಥ ।। ಚರಣ ।।

ವ್ಯಾಸತತ್ತ್ವಜ್ಞರ 

ದರ್ಶನಾದಿ ಗೈದು ।

ಸಂಸ್ಥಾನ ಗದ್ವಾಲಿನಲ್ಲಿ 

ಚಾತುರ್ಮಾಸ್ಯ ಕುಳಿತೂ ।

ಹಾಸದಲಿ ಆಶ್ರಮದಿ 

ಸುಯಮೀ೦ದ್ರರಿಗೆಯಿತ್ತು ।

ವಾಸ ಮಂತ್ರಾಲಯದಿ 

ಲಕುಮೀಶ್ನ ಧ್ಯಾನಿಪರ ।। ಚರಣ ।।

****

No comments:

Post a Comment